ಬೆಳಗಾವಿ : 20 ವರ್ಷಗಳ ಹಿಂದಿನ ಆಸ್ತಿ ವಿವಾದ ಸಂಬಂಧ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಅಥಣಿ ತಾಲೂಕು ಕೊಕಟನೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು ದಬದಬಹಟ್ಟಿ ಗ್ರಾಮದ ಕೇಶವ ಬೋಸಲೆ ಕೊಲೆ ಆಗಿದ್ದಾರೆ. ಖಂಡೋಬಾ ಬೋಸಲೆ ಕೊಲೆಗೈದಿದ್ದು ಐಗಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಐಗಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ನಿನ್ನೆ ಈ ಇಬ್ಬರು ದಾಯಾದಿಗಳು ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ನಂತರ ಮಾತಿನ ಚಕಮಕಿ ನಡೆದು ಕೊಲೆಯಾಗಿದೆ. 20 ವರ್ಷಗಳಿಂದ ಜಮೀನು ಸಲುವಾಗಿ ಚಿಕ್ಕಪ್ಪ ಮತ್ತು ಮಗನ ನಡುವೆ ಜಗಳವಾಗುತ್ತಿದ್ದು, ಇದೇ ಘಟನೆಗೆ ಕಾರಣ ಎನ್ನಲಾಗಿದೆ.