ಅಯೋಧ್ಯೆ:
ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಿದ ನಂತರ 11 ದಿನದ ಅವಧಿಯಲ್ಲಿ ಅಯೋಧ್ಯೆ ರಾಮಮಂದಿರಕ್ಕೆ 25 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ದೇಗುಲದ ಹುಂಡಿಗೆ 11 ಕೋಟಿ ₹ ಹರಿದುಬಂದಿದೆ.
ನೇರವಾಗಿ ಹುಂಡಿಗೆ 8 ಕೋಟಿ ₹ ಹಾಗೂ ಆನ್‌ಲೈನ್ ಮೂಲಕ ಪ್ರತ್ಯೇಕವಾಗಿ 3.5 ಕೋಟಿ ₹. ಸಂಗ್ರಹವಾಗಿದೆ. ದೇಗುಲದ ಗರ್ಭಗುಡಿಯಲ್ಲಿ 4 ದೊಡ್ಡ ಹುಂಡಿಗಳನ್ನು ಇಡಲಾಗಿದ್ದು, ಅಲ್ಲಿ ಭಾರಿ ದೇಣಿಗೆ ಸಂಗ್ರಹವಾಗುತ್ತಿದೆ. 11 ಬ್ಯಾಂಕ್ ಉದ್ಯೋಗಿಗಳು ಸೇರಿ 14 ಮಂದಿ ಹುಂಡಿ ಎಣಿಸುತ್ತಾರೆ .