ಹುಬ್ಬಳ್ಳಿ: ಇಲ್ಲಿಯ ಹಳೆಕೋರ್ಟ್ ವೃತ್ತದ ಬಳಿ ನಡೆಯುತ್ತಿದ್ದ ಮೇಲು ಸೇತುವೆ ಕಾಮಗಾರಿ ಸಂದರ್ಭದಲ್ಲಿ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯಗೊಂಡು ಕೆ ಎಂ ಸಿ-ಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನಗರ ಠಾಣೆ ಎಎಸ್ಐ ನಾಭಿರಾಜ ದಯಣ್ಣವರ್ (59) ರವಿವಾರ ಮೃತಪಟ್ಟಿದ್ದಾರೆ.

ಸತ್ತೂರು ರಾಜಾಜಿನಗರ ನಿವಾಸಿಯಾಗಿರುವ ಅವರು ಸೆಪ್ಟೆಂಬರ್ ಹತ್ತರಂದು ಕರ್ತವ್ಯಕ್ಕೆ ತೆರಳುತ್ತಿರುವ ವೇಳೆ ಕಬ್ಬಿಣದ ರಾಡ್ ತಲೆ ಮೇಲೆ ಬಿದ್ದಿತ್ತು. ಮೆದುಳಿಗೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬಿದ್ದು ಆಘಾತವಾಗಿದ್ದರಿಂದ ಅವರು ಪ್ರಜ್ಞಾಹೀನರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಅವಘಡಕ್ಕೆ ಸಂಬಂಧಿಸಿದ ಈಗ ಮೇಲು ಸೇತುವೆ ಗುತ್ತಿಗೆ ಪಡೆದ ಜಂಡು ಕಂಪನಿಯ ಮೂವರು ವ್ಯವಸ್ಥಾಪಕರು ಸೇರಿದಂತೆ 19 ಜನರ ವಿರುದ್ಧ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದುರಂತ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.