ದೆಹಲಿ : ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಗಮನಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಪೀಠವು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿಯನ್ನು ಕೋರಿದೆ.

ಈ ವಿಚಾರದಲ್ಲಿ ಅಟಾರ್ನಿ ಜನರಲ್ (ಎಜಿ) ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ಸಹಾಯವನ್ನೂ ಕೋರ್ಟ್ ಕೋರಿದೆ.

ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಮಾಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ನಮಗೆ ಸಹಾಯ ಮಾಡಲು ನಾವು ಎಜಿ ಮತ್ತು ಎಸ್‌ಜಿ ಅವರನ್ನು ಕೇಳಿದ್ದೇವೆ. ಈ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಾವು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರನ್ನು ಕೇಳುತ್ತೇವೆ. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಕೋರಬಹುದು ಎಂದು ಉಚ್ಛ ನ್ಯಾಯಾಲಯವು ನಿರ್ದೇಶಿಸಿದೆ.

ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಹಾಕಬಹುದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ವಿ ಶ್ರೀಶಾನಂದ ಹೇಳಿದ್ದೇನು ?
ನ್ಯಾಯಮೂರ್ತಿ ಶ್ರೀಶಾನಂದ ಅವರ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಒಂದು ವೀಡಿಯೊದಲ್ಲಿ, ಅವರು ಪಶ್ಚಿಮ ಬೆಂಗಳೂರಿನಲ್ಲಿ ಮುಸ್ಲಿಂ ಪ್ರಾಬಲ್ಯದ ಉಪ-ಪ್ರದೇಶವನ್ನು ‘ಪಾಕಿಸ್ತಾನ’ ಎಂದು ಉಲ್ಲೇಖಿಸುತ್ತಿದ್ದಾರೆ.

ಇನ್ನೊಂದು ವೀಡಿಯೊದಲ್ಲಿ, ಎದುರಿನ ವಕೀಲರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಕ್ಕಾಗಿ ಅವರು ಮಹಿಳಾ ವಕೀಲರನ್ನು ಛೀಮಾರಿ ಹಾಕುತ್ತಿರುವುದನ್ನು ಕಾಣಬಹುದು.

ನ್ಯಾಯಾಧೀಶರು ಮಹಿಳಾ ವಕೀಲರಿಗೆ ಎದುರು ಪಕ್ಷದ ಬಗ್ಗೆ ಸಾಕಷ್ಟು ತಿಳಿದಿರುವಂತೆ ತೋರುತ್ತಿದೆ ಮತ್ತು ಅವರು ಮುಂದೆ ಅವನ ಒಳ ಉಡುಪುಗಳ ಬಣ್ಣವನ್ನು ಸಹ ಬಹಿರಂಗಪಡಿಸಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.

ದರ್ಶನ ಪ್ರಕರಣದ ಸದ್ದು :
ಶೆಡ್ಡಿ ಗ್ ಬಾ …ನಟ ದರ್ಶನ ಕೊಲೆ ಪ್ರಕರಣದ ಸುದ್ದಿ ಪ್ರಸಾರದ ವೇಳೆ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಹೇಳಿದ್ದ ಪದ ಬಳಿಕ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿತ್ತು. ಕನ್ನಡಿಗರು ಮಾತ್ರವಲ್ಲ. ಬೇರೆ ಭಾಷೆಯವರು ರೀಲ್ಸ್ ಮಾಡಿದರು. ಎಲ್ಲೆಡೆ ಭಾರಿ ಜನಪ್ರಿಯವಾಗಿ ರುವ ‘ಶೆಡ್ಡಿ ಗ್ ಬಾ’ ಪದವನ್ನು ಇದೀಗ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ವಿಚಾರಣೆ ಸಂದರ್ಭದಲ್ಲಿ ಬಳಿಸಿದ್ದು ವೈರಲ್ ಆಗಿದೆ.

ತಮ್ಮ ವಿಚಾರಣೆಯ ಶೈಲಿಯಿಂದಲೇ ಸಾಕಷ್ಟು ಗಮನ ಸೆಳೆದಿರುವ ಹೈಕೋರ್ಟ್ ನ್ಯಾಯಾಧೀಶ ವಿ. ಶ್ರೀಶಾನಂದ ಅವರು, ಮೀಟರ್ ಬಡ್ಡಿ ದಂಧೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಶೆಡ್ಡಿ ಗ್ ಬಾ ಎಂದರು. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಹಲವು ಸಮಸ್ಯೆಗಳ ಬಗ್ಗೆ ಅವರಿಗೆ ಗೊತ್ತಿರುವ ಮಾಹಿತಿ ನೋಡಿ ಜನ ಅಚ್ಚರಿಪಟ್ಟಿದ್ದರು.

ನ್ಯಾಯಾಧೀಶರು ಹೇಳಿದ್ದೇನು?
ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ನಡೆಯುವ ಮೀಟರ್ ಬಡ್ಡಿದಂಧೆಯ ಬಗ್ಗೆ ನ್ಯಾಯಾಧೀಶ ವಿ. ಶ್ರೀಶಾನಂದ ವಿವರಣೆ ನೀಡಿದ್ದರು. ಬೆಳಿಗ್ಗೆ ವೇಳೆ ಸಿಟಿ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವವರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಬೆಳಗ್ಗೆ 1000 ರು. ಕೊಡುತ್ತಾರೆ. ವ್ಯಾಪಾರ ಮುಗಿದ ಬಳಿಕ ಸಂಜೆ 1200 ರು. ವಾಪಸ್ ಕೊಡಬೇಕು. ಆಟೋಡ್ರೈವರ್‌ಗಳು ಬೆಳಿಗ್ಗೆ ಬಂದು ಆಟೋ ಬಾಡಿಗೆಗೆ ತೆಗೆದುಕೊಂಡು ಹೋಗಬೇಕು. ಸಂಜೆಗೆ 250 ರುಪಾಯಿ ಕೊಡಬೇಕು. ಎಷ್ಟು ಬೇಕಾದರು ಆಟೋ ಓಡಿಸಿ ಸಂಪಾದನೆ ಮಾಡಬಹುದು. ಟ್ರಾಫಿಕ್ ಫೈನ್ ಕಟ್ಟು, ಪೊಲೀಸರ ಜತೆ ಹೊಡೆದಾಡಿಕೊ. ಅದಕ್ಕೂ ನನಗೂ ಸಂಬಂಧವಿಲ್ಲ, 250 ರು. ಕೊಡದೇ ಇದ್ದರೆ ಶೆಡ್ಡಿ ಗ್ ಬಾ ಎಂದು ಕರೆಯುತ್ತಾರೆ ಎಂದು ಹೇಳಿದ್ದರು.