ಬೆಳಗಾವಿ : ಗುತ್ತಿಗೆದಾರರಾಗಿದ್ದ ಸಂತೋಷ ಪದ್ಮಣ್ಣವರ ಸಾವಿನ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಇದೀಗ ಮಹತ್ವದ ಹೇಳಿಕೆ ನೀಡಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಂತೋಷ ಪದ್ಮಣ್ಣವರ ಅವರ ಸಾವಿನ ಬಗ್ಗೆ ಅವರ ಮಗಳು ದೂರು ನೀಡಿದ್ದಾರೆ. ಅವರ ಸಾವು ಅನುಮಾನ ಮೂಡಿಸಿದೆ. ಹೀಗಾಗಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಹೀಗಾಗಿ ದೂರು ದಾಖಲು ಮಾಡಿಕೊಂಡಿದ್ದೇವೆ. ಅವರ ಸಾವಿನ ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ನಿಖರವಾಗಿ ಎಲ್ಲಾ ಗೊತ್ತಾಗಲಿದೆ. ಕೊಲೆ ನಡೆದಿರುವುದು ನಿಜವೇ ಆಗಿದ್ದರೆ ಆನಂತರ ಪೊಲೀಸ್ ತನಿಖೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ದಶಾವಳಿ ಡಿಲೀಟ್ ಆಗಿದೆ. ಇದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.