ಬೆಳಗಾವಿ : ಸೋಮವಾರ ಅಕ್ಟೋಬರ್ 21ರಂದು ಬೈಲಹೊಂಗಲ ಬಂದ್ ಕರೆ ನೀಡಲಾಗಿದೆ. ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವ ಅಕ್ಟೋಬರ್ 23ರಂದು ವೈಭವದಿಂದ ನಡೆಯಲಿದೆ. ಈ ವರ್ಷ ಕಿತ್ತೂರು ವಿಜಯೋತ್ಸವದ 200 ನೇ ವರ್ಷಾಚರಣೆ ಸಂಭ್ರಮ. ಆದರೆ ಈ ಸಂದರ್ಭದಲ್ಲಿ ಬೈಲಹೊಂಗಲವನ್ನು ಕಡೆಗಣಿಸಲಾಗಿದೆ. ಕಾರ್ಯಕ್ರಮಗಳು ಕೇವಲ ಕಿತ್ತೂರಿಗೆ ಮಾತ್ರ ಸೀಮಿತವಾಗಿದೆ. ವೀರ ರಾಣಿ ಚನ್ನಮ್ಮ ಸಮಾಧಿ ಇರುವ ಬೈಲಹೊಂಗಲದಲ್ಲಿ ಯಾವುದೇ ಕಾರ್ಯಕ್ರಮ ನಡೆಸದೇ ಇರುವುದರಿಂದ ಬೈಲಹೊಂಗಲ ಬಂದ್ ಕರೆ ನೀಡಲಾಗಿದೆ ಎಂದು ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ತಿಳಿಸಿದೆ. ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಅಂದು ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ ಯಶಸ್ವಿಗೊಳಿಸುವಂತೆ ಕೋರಲಾಗಿದೆ.