ವಿಜಯಪುರ: ಮುದ್ದೇಬಿಹಾಳ ತಾಲೂಕು ಗಡಿಭಾಗದ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋದ ಯುವಕ ನೀರು ಪಾಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ನಾಗಬೇನಾಳ ಗ್ರಾಮದ ಮಂಜುನಾಥ ಮಾದರ (28)ನೀರುಪಾಲಾದವನು. ನಾರಾಯಣಪುರ ಚೆಕ್ ಪೋಸ್ಟ್ ಬಳಿ ಕುರಿಗಳನ್ನು ಮೇಯಿಸಲು ಹೋಗಿದ್ದ. ಕುರಿಮರಿಯೊಂದು ಕಾಲುವೆಗೆ ಇಳಿದು ನೀರು ಕುಡಿಯಲು ಮುಂದಾದಾಗ ಅದು ಹರಿದು ಹೋಗಿದೆ. ಅದನ್ನು ರಕ್ಷಿಸಲು ಹೋದ ಮಂಜುನಾಥ ಮೇಲೆ ಬರಲಾಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನೀರುಪಾಲಾದವನ ಶೋಧ ಕಾರ್ಯ ನಡೆದಿದೆ.