ತುಮಕೂರು: ಗಣೇಶ ವಿಸರ್ಜನೆ ವೇಳೆ ತಂದೆ-ಮಗ ಸೇರಿ ಮೂವರು ನೀರುಪಾಲಾಗಿದ್ದು, ಸಾವಿನ ಶಂಕೆ ಮೂಡಿದೆ. ಘಟನೆ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮದ ರಂಗನ ಹಟ್ಟಿಕೆರೆಯಲ್ಲಿ ನಡೆದಿದೆ. ತಂದೆ ರೇವಣ್ಣ (46), ಪುತ್ರ ಶರತ್ (26) ಮತ್ತು ದಯಾನಂದ ಮೃತಪಟ್ಟವರು. ಗ್ರಾಮದಲ್ಲಿ ಇಟ್ಟಿದ್ದ ಗಣಪತಿ ಮೂರ್ತಿ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ಅವರು ಕೆರೆಯಲ್ಲಿ ಮುಳುಗಿದ್ದಾರೆ. ಅವರ ಶೋಧ ಕಾರ್ಯವನ್ನು ಅಗ್ನಿಶಾಮಕ ದಳ ಕೈಗೊಂಡಿದೆ.