ಬೆಳಗಾವಿ: ಅಥಣಿ ಮೂಲದವರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಕುಟುಂಬ ಪ್ರಬೋಧನ ಗತಿ ವಿಧಿಯ ಉತ್ತರ ಕರ್ನಾಟಕ ಪ್ರಾಂತದ ಸಂಯೋಜಕ ಪ.ರಾ. ನಾಗರಾಜ ಭಟ್ಟ (62) ಮಂಗಳವಾರ ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಸಹೋದರರು, ಸಹೋದರಿ ಹಾಗೂ ಅಪಾರ ಬಂಧುಗಳು ಇದ್ದಾರೆ.

ಅವರು ಮೂಲತಃ ಅಥಣಿಯವರು. ಸದ್ಯ ಹುಬ್ಬಳ್ಳಿ ಗೋಕುಲ ರಸ್ತೆಯ ಕೋಟಿಲಿಂಗ ನಗರದಲ್ಲಿ ವಾಸವಾಗಿದ್ದರು. 12 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ವಿಭಾಗ, ಪ್ರಾಂತ ಸ್ತರದಲ್ಲಿ ಸಂಘದ ಜವಾಬ್ದಾರಿ ನಿರ್ವಹಿಸಿದ್ದರು. ಸದ್ಯ ಕುಟುಂಬ ಪ್ರಬೋಧನ ಗತಿ ವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು.