ಬೆಳಗಾವಿ: ಹುಬ್ಬಳ್ಳಿಯ ಜಿ ಕೆ ಕಾನೂನು ಕಾಲೇಜು ಆಯೋಜಿಸಿದ್ದ ರಾಜ್ಯ ಮಟ್ಟದ ಪ್ಯಾನಲ್ ಚರ್ಚಾ ಸ್ಪರ್ಧೆಯಲ್ಲಿ ಬೆಳಗಾವಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಪೂಜಾರಿ ಮತ್ತು ಫಣಿ ರಾಘವೇಂದ್ರ ದೇಸಾಯಿ ಪ್ರಥಮ ಬಹುಮಾನ ಪಡೆದಿದ್ದಾರೆ.ತಂಡ 5000 ರೂಪಾಯಿಯೊಂದಿಗೆ ಪ್ರಥಮ ಬಹುಮಾನ, ಬೆಸ್ಟ್ ಸ್ಪೀಕರ್ ಬಹುಮಾನವನ್ನು ಮಲ್ಲಿಕಾರ್ಜುನ ಪೂಜಾರಿ ಅವರು 1000 ರೂ.ಬಹುಮಾನದೊಂದಿಗೆ ಪಡೆದುಕೊಂಡರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಕಾಲೇಜಿನ ಚರ್ಚಾ ಒಕ್ಕೂಟದ ಅಧ್ಯಕ್ಷೆ ಪ್ರೊ.ಮಾಧುರಿ ಕುಲಕರ್ಣಿ, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಂಡವನ್ನು ಅಭಿನಂದಿಸಿದರು.