![](https://udayaprabha.com/wp-content/uploads/2024/03/IMG-20240331-WA0241.jpg)
ಬೆಳಗಾವಿ : ತೆಲಂಗಾಣ ಬಿಜೆಪಿ ಪ್ರಭಾರಿ, ಬೆಳಗಾವಿ ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲ ಅವರು ಇಂದು ಹೈದರಾಬಾದ್ನಲ್ಲಿರುವ ಬಿಜೆಪಿ ಶಾಸಕ ರಾಜಾಸಿಂಗ್ ಅವರ ನಿವಾಸದಲ್ಲಿ ಭೇಟಿಯಾಗಿ, ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಿದರು.
ಶಾಸಕ ಹಾಗೂ ಬಿಜೆಪಿ ಮುಖಂಡ ಅಲೆಟಿ ಮಹೇಶ್ವರ ರೆಡ್ಡಿ, ಹೈದರಾಬಾದ್ ಲೋಕಸಭಾ ಪ್ರಭಾರಿ ಅಟ್ಲೂರಿ ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ಅಭಯ ಪಾಟೀಲ ಮಾಧ್ಯಮದವರೊಂದಿಗೆ ಮಾತನಾಡಿ, ತೆಲಂಗಾಣ ರಾಜ್ಯದಲ್ಲಿ ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದು ಬಹುಮತ ಗಳಿಸಲಿದೆ ಎಂದು ಹೇಳಿದರು.