![](https://udayaprabha.com/wp-content/uploads/2024/02/IMG_20240210_145842.jpg)
ಭೋಜರಾಜ ಅವರಿಗೆ ಪಿಎಚ್ ಡಿ
ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಭೋಜರಾಜ ಟಿ. ಎಸ್. ಅವರಿಗೆ ಪಿಎಚ್ ಡಿ ನೀಡಿದೆ.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ‘ಯಶೋಧರ ಚರಿತೆ ಕೇಂದ್ರಿತ ಆಧುನಿಕ ಮೀಮಾಂಸೆ (ಮನಃಶಾಸ್ತ್ರೀಯ ವಿಮರ್ಶೆಗಳನ್ನು ಅನುಲಕ್ಷಿಸಿ) ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಿದೆ. ಅವರಿಗೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಶೋಭಾ ನಾಯಕ ಮಾರ್ಗದರ್ಶಕರಾಗಿದ್ದರು.