ಬೆಳಗಾವಿ : ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಪಡೆದಿರುವ ಜಾತಿ ವರದಿ ದತ್ತಾಂಶವು ಅವೈಜ್ಞಾನಿಕವಾಗಿದೆ. ವೀರಶೈವ ಲಿಂಗಾಯತ ಸಮುದಾಯವು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ತೀವ್ರವಾಗಿ ಖಂಡಿಸಿದ್ದಾರೆ.

ಜಾತಿಯ ಸಂದರ್ಭದಲ್ಲಿ ರಾಜಕೀಯವನ್ನು ಮಾಡಬಾರದು. ನೈಜವಾದ ವರದಿಯಾಗಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಈ ವರದಿಯು ಪಾರದರ್ಶಕವೆನಿಸುವುದಿಲ್ಲ. ವರದಿಯು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಸರಿಯಾದ ಅಂಕೆಅಂಶಗಳನ್ನು ಸಂಗ್ರಹಿಸಿ ವರದಿ ರೂಪಿಸಬೇಕು. ಸರಿಯಾಗಿ ಯಾರಿಗೂ ಭೇಟಿಯಾಗದೆ ತರಾತುರಿಯಲ್ಲಿ ಮಾಡಿರುವುದನ್ನು ನಮ್ಮ ಸಮಾಜವು ಒಪ್ಪಲಾರದು. ಸರ್ಕಾರವು ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಇದನ್ನು ರೂಪಿಸಲಿ. ಮತ್ತೊಮ್ಮೆ ಅಮೂಲಾಗ್ರವಾಗಿ ಪರಾರ್ಮಶಿಸಬೇಕು. ಇದನ್ನು ನಮ್ಮ ಸಮಾಜ ಒಕ್ಕೊರಿಲಿನಿಂದ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಪದಾಧಿಕಾರಿಗಳು ಈ ವರದಿಯನ್ನು ವಿರೋಧಿಸಿದ್ದಾರೆ.