ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ಕರ್ನಾಟಕ ಹೈಕೋರ್ಟ್‌ನ 5 ಹೆಚ್ಚುವರಿ ನ್ಯಾಯಾಧೀಶರನ್ನು ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೆಚ್ಚುವರಿ ನ್ಯಾಯಾಧೀಶರಾದ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ, ಅನಿಲ್‌ ಭೀಮಸೇನ್‌ ಕತ್ತಿ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ ಮಂಜುನಾಥ ಭಟ್ ಅಡಿಗ ಮತ್ತು ತಲಕಾಡ್ ಗಿರಿಗೌಡ ಶಿವಶಂಕರೇಗೌಡ ಅವರನ್ನು ಕಾಯಂಗೊಳಿಸುವಂತೆ ಕೊಲಿಜಿಯಂ ಶಿಫಾ ರಸು ಮಾಡಿದೆ. ಹಾಗೆಯೇ ನ್ಯಾಯಾಧೀಶ ಗುರು ಸಿದ್ದಯ್ಯ ಬಸವರಾಜ ಅವರನ್ನು ಆ.16 ರಿಂದ 1 ವರ್ಷದ ಅವಧಿಗೆ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ತಿಳಿಸಿದೆ.