ದೆಹಲಿ: ರಸ್ತೆಗಳಲ್ಲಿ ನಡೆಯುವ ಅಪಘಾತಗಳಿಂದ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಹೆದ್ದಾರಿಗಳಲ್ಲಿ ಪ್ರತಿ 120 ಕಿಲೋಮೀಟರ್ ಗಳಿಗೆ ಒಂದು 300 ಹಾಸಿಗೆಗಳ ಬಹು ವಿಧದ ಅಪಘಾತ ಚಿಕಿತ್ಸಾ ಆರೈಕೆ ಕೇಂದ್ರ (ಟ್ರಾಮಾ ಕೇರ್ ಸೆಂಟರ್) ಸ್ಥಾಪನೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರು ನಿಮಾನ್ಸ್ ನಲ್ಲೂ ಇದನ್ನು ತೆರೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.