ಮೂಡಲಗಿ:
ಯಾಂತ್ರಿಕ ಬದುಕು ಮತ್ತು ಆಧುನಿಕತೆಯ ಅಬ್ಬರದಲ್ಲಿ ವ್ಯಾಯಾಮ ಶಾಲೆ, ಗರಡಿ ಮನೆಗಳು ಅವಸಾನದ ಅಂಚಿಗೆ ತಲುಪಿವೆ. ಅವುಗಳನ್ನು ಮರು ಸ್ಥಾಪಿಸಿ ಯುವಕರನ್ನು ಪ್ರೇರಣೆಗೋಳಿಸುವ ಮೂಲಕ ಪ್ರಾಚೀನ ಭಾರತದ ಕ್ರೀಡೆಗಳಾದ ಕುಸ್ತಿ ಕಬಡ್ಡಿ ಆಟಗಳಿಗೆ ಆದ್ಯತೆ ನೀಡಲಾಗುತ್ತದೆ ಗತಕಾಲದ ವೈಭವ ಮತ್ತೆ ಮರುಕಳಿಸಿದ್ದು ದೇಶಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ರವಿವಾರ ಕಲ್ಲೋಳಿ ಪಟ್ಟಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಗರಡಿ ಮನೆ ಕಟ್ಟಡ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೊದಲೆಲ್ಲ ಕುಸ್ತಿ ಮಾಡುವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು. ಗರಡಿ ಮನೆಗಳು ಕಟ್ಟುಮಸ್ತಾದ ದೇಹಾಡ್ಯತೆಗೆ ಯೋಗ್ಯ ಸ್ಥಳಗಳಾಗಿದ್ದವು. ಇದರಿಂದಾಗಿ ಆರೋಗ್ಯ ಉತ್ತಮವಾಗಿರುತ್ತಿತ್ತು. ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಗರಡಿ ಮನೆಗಳ ಮಹತ್ವ ತಿಳಿದಿಲ್ಲ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ, ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ ಮತ್ತೆ ಅವರನ್ನು ಗರಡಿ ಮನೆಗಳತ್ತ ಸೆಳೆಯುವ ಮೂಲಕ ಕುಸ್ತಿಯ ಗತ ವೈಭವ ಮರುಕಳಿಸಲು ಗ್ರಾಮದ ಹಿರಿಯರು ಸಹಕರಿಸಬೇಕಾಗಿ ಕರೆ ನೀಡಿದರು.

ರಾಜ ಮಹಾರಾಜರ ಕಾಲದಲ್ಲಿ ಕುಸ್ತಿಗೆ ಭಾರೀ ಮಹತ್ವವಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆಗಳಲ್ಲಿ ಮಾತ್ರ ನಾವು ಕುಸ್ತಿ ಆಟವನ್ನು ನೋಡುವಂತಾಗಿದೆ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ವೈಭವೀಕರಿಸಲು ಕುಸ್ತಿ, ಕಬಡ್ಡಿಯಂತಹ ದೇಶಿ ಆಟಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಲ್ಲೋಳಿ ಪಟ್ಟಣದಲ್ಲಿ ಗರಡಿ ಮನೆ ಕಟ್ಟಡಕ್ಕೆ ಪುನರ ನಿರ್ಮಾಣ ಕಾರ್ಯಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗಿದ್ದು, ಪಟ್ಟಣದ ಯುವಜನತೆ ಗರಡಿ ಮನೆಗಳ ಸದುಯೋಗ ಪಡೆಸಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಮುಖರಾದ ಬಸವರಾಜ ಕಡಾಡಿ, ಶಂಕರ ಗೋರೋಶಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಶ್ರೀಶೈಲ ತುಪ್ಪದ, ಅಡಿವೆಪ್ಪ ಕುರಬೇಟ, ಶಿವಾನಂದ ಹೆಬ್ಬಾಳ, ಗುರುನಾಥ ಮದಭಾಂವಿ, ಪಂಚಣ್ಣ ಹೆಬ್ಬಾಳ, ಅಜೀತ ಚಿಕ್ಕೋಡಿ, ದಸ್ತಗೀರ ಕಮತನೂರ, ಸೋಮಲಿಂಗ ಹಡಗಿನಾಳ, ಸಿದ್ದಪ್ಪ ಗದಾಡಿ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ, ಪಟ್ಟಣದ ಪೈಲವಾನರಾದ ಲಕ್ಷ್ಮಣ ಉಮರಾಣಿ, ಹಣಮಂತ ಮೆಚ್ಚನ್ನವರ, ಚಿಂತಾಮಣಿ ಗುದನ್ನವರ, ಬಸವರಾಜ ಕರಡಿಗುದ್ದಿ, ದಸ್ತಗೀರ ತಹಶೀಲ್ದಾರ, ನಾಗಪ್ಪ ಗಾಡಿವಡ್ಡರ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ, ಗೋಕಾಕ ಕೆ.ಆರ್.ಡಿ.ಎಲ್. ಸಂಸ್ಥೆಯ ಸಿಬ್ಬಂದಿ ಮಂಜುನಾಥ ಕಮತೆ ಸೇರಿದಂತೆ ಗರಡಿ ಮನೆ ವಿದ್ಯಾರ್ಥಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.