ಬೆಳಗಾವಿ: ರಿಂಗ್ ರೋಡ್ ಯೋಜನೆಯ ಭಾಗವಾಗಿರುವ ಹಲಗಾ ಮತ್ತು ಮಚ್ಚೆ ಬೈಪಾಸ್ ಗೆ ಪಡಿಸಿಕೊಳ್ಳಲಾಗುತ್ತಿರುವ ತಮ್ಮ ಭೂಮಿಗೆ ಪರಿಹಾರ ಧನ ಹೆಚ್ಚಿಸುವಂತೆ ರೈತರು ಇದೀಗ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಈಗಾಗಲೇ ವಾಗ್ದಾನ ಮಾಡಿದ್ದಾರೆ. ರೈತರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿರುವ ಸಚಿವರು, ರೈತರ ಸಮಸ್ಯೆಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಿ ರೈತರಿಗೆ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಬೆಳಗಾವಿಯ ಅತ್ಯಂತ ಮಹತ್ವದ ಈ ಬೈಪಾಸ್ ರಸ್ತೆಗೆ 15 ಕಿ.ಮೀ ಯಷ್ಟು ಭೂಮಿ ಬೇಕಾಗಿದ್ದು ಇದಕ್ಕೆ ಇದೀಗ ರೈತರು ಹೆಚ್ಚಿನ ದರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ಬಾಕಿ ಉಳಿದಿದೆ. ಅಕ್ಟೋಬರ್ 30 ರಂದು ಇದರ ವಿಚಾರಣೆ ನಡೆಯಲಿದೆ. ಮೊದಲು ಹೇಳಿದ ರಸ್ತೆಗೆ ಹಣ ನಿಗದಿಪಡಿಸಿ ನಂತರ ಬೈಪಾಸ್ ಕಾರ್ಯ ವಿಧಾನ ಪ್ರಾರಂಭಿಸಬಹುದು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ರೂ.15 ಕೋಟಿ ಪರಿಹಾರವನ್ನು
ರೂ. 45 ಕೋಟಿಗೆ ಹೆಚ್ಚಿಸಲಾಗಿದೆ. ಸ್ಥಳೀಯ ರೈತರು ತಮಗೆ ಆಗುವ ನಷ್ಟವನ್ನು ಸರಿದೂಗಿಸಲು ಈ ಹಣ ಸಾಕಾಗುವುದಿಲ್ಲ ಎಂದು ವಾದ ವಾಸಿಸುತ್ತಿದ್ದಾರೆ. ಈಗಾಗಲೇ 77 ಎಕರೆಗೆ ಪರಿಹಾರ ವಿತರಿಸಲಾಗಿದ್ದು ಹೆಚ್ಚುವರಿಯಾಗಿ 55 ಎಕರೆ ಪರಿಹಾರವನ್ನು ಸದ್ಯ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಈ ನಡುವೆಯೂ ರೈತರು ಪ್ರಸ್ತಾವಿತ ಪರಿಹಾರದಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಸಚಿವ ಸತೀಶ ಜಾರಕಿಹೊಳಿಯವರು ಇದೀಗ ಅಧಿಕಾರಿಗಳ ಮುಂದೆ ರೈತರ ಪರ ಬೇಡಿಕೆಗಳನ್ನು ಮುಂದಿಡಲು ಬಯಸಿದ್ದು ಯೋಜನೆ ಮತ್ತಷ್ಟು ಶೀಘ್ರವಾಗಿ ತರಲು ಮುಂದಾಗಿದ್ದಾರೆ.