ಬೆಳಗಾವಿ :
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಕಾಕತಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 18.12.2023 ರಂದು ಪಿರ್ಯಾದಿ ಸಿದ್ದಗೌಡ ಬಿರಾದರ ಸಾ.ಗೋಕಾಕ ಅವರು ನೀಡಿದ ದೂರಿನನ್ವಯ ಆರೋಪಿತರ ವಿರುದ್ಧ ಕಾಕತಿ ಠಾಣೆಯಲ್ಲಿ ಪ್ರ.ಸಂ. 264/23 ಕಲಂ. 419, 420 ಐಪಿಸಿ ಅಡಿ ವಂಚನೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿತ್ತು.

ಅದರಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಮಹಿಳೆ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1.ದೀಪಾ ಅವಟಗಿಯನ್ನು ಡಿಸೆಂಬರ 21 ರಂದು, 2.ಶಿವಾನಂದ ಮಠಪತಿ 3.ಅಪ್ಪಯ್ಯ ಪೂಜಾರಿ ಇವರನ್ನು 22ರಂದು ಹಾಗೂ 4.ಸುನಿಲ್ ವಿಭೂತಿ,
5.ಸಚಿನ್ ಕುಮಾರ್ ಅಂಬಲಿ, 6.ಭರತೇಶ್ ಅಗಸರ, 7.ಶಶಾಂಕ ರಾವಸಾಹೇಬ್ ದೊಡ್ಡಣ್ಣವರ್ ಇವರನ್ನು ದಿನಾಂಕ 23.12.23 ರಂದು ದಸ್ತಗಿರಿ ಮಾಡಲಾಗಿದೆ. ಹೀಗೆ ಒಟ್ಟು ಏಳು ಜನ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ

ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಎರಡು ವಾಹನ ಹಾಗೂ ಹನ್ನೊಂದು ಲಕ್ಷ ನಗದು ಹೀಗೆ ಒಟ್ಟು 22 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಾಕತಿ ಪೊಲೀಸರು ತಿಳಿಸಿದ್ದಾರೆ.