ವಿಜಯಪುರ: ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮತ್ತು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ವಿಜಯಪುರದ 32 ವರ್ಷದ ಅರ್ಜುನ ಕುಶಾಲ್ ಸಿಂಗ್ ರಜಪೂತ, 12 ವರ್ಷದ ಮೇಘರಾಜ ಅರ್ಜುನ ರಜಪೂತ, 52 ವರ್ಷದ ರವಿನಾಥ ಸನಿಲಾಲ್ ಪತ್ತಾರ,40 ವರ್ಷದ ಪುಷ್ಪಾ ರವಿನಾಥ ಪತ್ತಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಕಾರಿನಲ್ಲಿ ಜಮಖಂಡಿ ದೇವಸ್ಥಾನಕ್ಕೆ ಹೊರಟಿದ್ದಾಗ ಜಮಖಂಡಿಯಿಂದ ಸಿಮೆಂಟ್ ತುಂಬಿಕೊಂಡು ವಿಜಯಪುರಕ್ಕೆ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.