ಬೆಳಗಾವಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಇಲ್ಲಿಯ ಮಹಾದ್ವಾರ ರಸ್ತೆಯ ಶಿವಗಿರಿ ಕೋ-ಅಪ್ ಕ್ರೆಡಿಟ್ ಸೊಸೈಟಿ ಮತ್ತು ಬಿಲ್ಲವರ ಅಸೋಸಿಯೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ (ಆಯುರ್ವೇದಿಕ್) ಸೆಪ್ಟೆಂಬರ್ 15 ರಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನ 2 ಗಂಟೆವರೆಗೆ ಏರ್ಪಡಿಸಲಾಗಿದೆ. ಬೈಲಹೊಂಗಲ ಬೇವಿನಕೊಪ್ಪ ನಿತ್ಯಾನಂದ ಆರೋಗ್ಯಧಾಮದ ಸಿದ್ದಗುರು ಪರಂಪರಾಗತ ವೈದ್ಯರಾದ ಶ್ರೀ ವಿಜಯಾನಂದ ಸ್ವಾಮೀಜಿ ಅವರ ನೇತೃತ್ವದ ತಂಡದಿಂದ ಈ ಆಯುರ್ವೇದಿಕ್ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಲಭ್ಯವಿರುವ ಚಿಕಿತ್ಸೆಗಳು :
ಸಂಧಿವಾತ (ಮೊಣಕಾಲು ನೋವು), ಅಮವಾತ, ಶರೀರದ ಎಲ್ಲ ಸಂಧು ನೋವು,
ಊತ, ಭುಜ, ಕುತ್ತಿಗೆ, ಸೊಂಟ ನೋವು ಇತರೆ ಎಲ್ಲ ರೀತಿಯ ನೋವು, ಪಾರ್ಶ್ವವಾಯು, ನರರೋಗ, ಮನಸ್ಸಿಗೆ ಸಂಬಂಧಿಸಿದ ರೋಗಗಳು, ಅರ್ಧ ಮತ್ತು ದೀರ್ಘ ಕಾಲಿಕ ತಲೆನೋವು, ಅಪಘಾತ ಮತ್ತು ಬಿದ್ದ ದೀರ್ಘ ಕಾಲಿಕ ನೋವು, ಪಚನ ಸಂಬಂಧಿತ ಕಾಯಿಲೆಗಳು, ಮೂಲವ್ಯಾಧಿ, ಆಮ್ಲಪಿತ್ತ (ಎಸಿಡಿಟಿ), ಥೈರಾಯ್ಡ್, ಪಿಸಿಒಡಿ, ಬಂಜೆತನ ಇತರೆ ಸ್ತ್ರೀರೋಗ ಸಂಬಂಧಿ ಸಮಸ್ಯೆಗಳು, ಲಿವರ್ ಸಂಬಂಧಿತ ಕಾಯಿಗಳು ಹಾಗೂ ಇತರೆ ಎಲ್ಲ ರೀತಿಯ ಕಾಯಿಲೆಗಳಿಗೆ ತ್ವರಿತ ಪರಿಹಾರಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಸುಜನ್ ಕುಮಾರ ಎಂ.
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗೆ ಮೊಬೈಲ್ ಸಂಖ್ಯೆ : 7899662701, 7022799089, 7899651420 ಇಲ್ಲಿಗೆ ಸಂಪರ್ಕಿಸಬಹುದು.