ಬೆಳಗಾವಿ: ಸಾಹಿತ್ಯ ರಚನೆ ಜನಪರವಾಗಿರಬೇಕು ಸಾಮಾನ್ಯ ಓದುಗನಿಗೂ ಅರ್ಥವಾಗಬೇಕು ಬೆರೆಸಿ ಬರೆಯದೆ ಬೆರೆತು ಬರೆಯಬೇಕು. ಜೀವನಾನುಭವದಿಂದ ರಚಿತವಾದ ಸಾಹಿತ್ಯ ಅನುಗಾಲವೂ ಜೀವಂತವಾಗಿರುತ್ತದೆ ಎಂದು ಸಾಹಿತಿ ಸಂಘಟಕ ಜನಸಾಹಿತ್ಯಪೀಠದ ಅಧ್ಯಕ್ಷ ಬಸವರಾಜ ಗಾರ್ಗಿ ಹೇಳಿದರು ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಇತ್ತಿತ್ತಲಾಗಿ ಸಾಕಷ್ಟು ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಅದಕ್ಕೆ ಬೆಳಗಾವಿ ಜಿಲ್ಲೆಯೂ ಹೊರತಲ್ಲ. ಕತೆ ಕಾವ್ಯ ಕಾದಂಬರಿ ಹಾಸ್ಯ ವಿಡಂಬನೆ ಮಕ್ಕಳ ಸಾಹಿತ್ಯದಲ್ಲಿ ಮೊದಲಾದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದು ಸತ್ವಯುತ ರಚನೆಗಳು ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ಲೇಖಕಿಯರು ಪ್ರಯತ್ನ ಮಾಡಬೇಕಾದ ಅಗತ್ಯವಿದೆ. ಲೇಖಕಿಯರು ಲೇಖಕರಿಗಿಂತ ಉತ್ತಮವಾದ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ .

ಲೇಖಕ ಸಮಾಜದ ಅನಧಿಕೃತ ಶಾಸಕ ಜನಸಾಮಾನ್ಯರ ತವಕ ತಲ್ಲಣಗಳು ಕೃತಿಯಲ್ಲಿ ಅನಾವರಣಗೊಳ್ಳಬೇಕೆಂದರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು ರಜತಮಹೋತ್ಸವದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ ೨೫ ರ ಸಂಭ್ರಮ ಅರ್ಥಪೂರ್ಣವಾಗಲೆಂದರು.
ದತ್ತಿ ದಾನಿಗಳಾದ ಜ್ಯೋತಿ ಬದಾಮಿ, ಇಂದಿರಾ ಮೋಟೆಬೆನ್ನೂರ, ಡಾ.ಹೇಮಾ ಸೋನೊಳ್ಳಿ, ರೋಹಿಣಿ ಯಾದವಾಡ, ಸುಧಾ ಪಾಟೀಲ, ಪ್ರಭಾ ಪಾಟೀಲ ಹುಂಡೇಕಾರ ಮಾತನಾಡಿದರು.
ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿ ಸಂಘದ ಚಟುವಟಿಕೆಗಳಿಗೆ ಸದಸ್ಯರೆ ಜೇವಾಳ ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಕಾರ್ಯಗಳನ್ನು ಸಂಘದಿಂದ ಹಮ್ಮಿಕೊಂಡು ಕಾರ್ಯವ್ಯಾಪ್ತಿ ವಿಸ್ತರಿಸುವ ಕುರಿತು ಯೋಚಿಸಲಾಗುತ್ತಿದೆ. ಮತ್ತಷ್ಟು ದತ್ತಿಗಳನ್ನು ಸ್ಥಾಪಿಸಿ ಉದಯೋನ್ಮುಖ ಲೇಖಕಿಯರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಮತ್ತು ಲಿಂಗಾಯತ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಭಿಂಗೆ ಆಕಾಶವಾಣಿ ಕಲಾವಿದ ಶ್ರೀರಂಗ ಜೋಶಿ ಸಂತೋಷ ನಾಯ್ಕ ಉಪಸ್ಥಿತರಿದ್ದರು. ಡಾ. ಭಾರತಿ ಮಠದ ಸ್ವಾಗತಿಸಿದರು. ಲೀಲಾ ಚೌಗಲೆ
ವಂದಿಸಿದರು. ಅನ್ನಪೂರ್ಣ ಹಿರೇಮಠ ನಿರೂಪಿಸಿದರು. ಹೀರಾ ಚೌಗಲೆ ದತ್ತಿ ಪ್ರಶಸ್ತಿಗಳನ್ನು ಪರಿಚಯಿಸಿದರು.
ದೀಪಿಕಾ ಚಾಟೆ, ವಿದ್ಯಾ ಹುಂಡೇಕರ, ಡಾ. ಗುರುದೇವಿ ಹುಲೆಪ್ಪನವರಮಠ, ರಂಜಿತಾ ಮಹಾಜನ, ಪದ್ಮಜಾ ಉಮರ್ಜಿ, ಪಾರ್ವತಿ ಪಿಟಗಿ, ರಾಜೇಶ್ವರಿ ಹೆಗಡೆ ವಿವಿದ ದತ್ತಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.