ಗೊಮ್ಮಟೇಶ್ವರ
**************
ಹಾಲಿನ ಧಾರೆಯಡಿ
ನಿಂತ ಬಾಲಕ
ಸಾವಿರ ವರ್ಷದ ಮಗು
ಆದರೂ ಮಾಸಲಿಲ್ಲ
ಮುಖದಲ್ಲಿ ನಗು
*********
ತ್ಯಾಗ ಮೂರ್ತಿ ವಿರಾಗಿ
ಹಾಗಾಗಿ
ಅವನು ಬೆತ್ತಲೆ
ಕರುನಾಡಿನ ಎಲ್ಲಾ ರಸ್ತೆಗಳೂ
ಈಗ ಸಾಗುತ್ತವೆ
ವೇಣೂರಿನತ್ತಲೆ
************
ಮೊದಲು ತಿಳಿನೀರು
ನಂತರ ಎಳನೀರು
ಮತ್ತೆ ಕ್ಷೀರಾಭಿಷೇಕ
ಅಲ್ಲಿಗೆ
ಮುಗಿಲ ಮೂರ್ತಿ
ಮಿಂದ ಮಲ್ಲಿಗೆ
*************
ಜಿನಗಣಮನ
ಅಧಿನಾಯಕ
ಜಯಹೇ
ಭರತನ ಸೋದರ
ಜಯಹೇ
*********
ನೀವೊಮ್ಮೆ ನಿಂತು ನೋಡಿರಿ
ಏಕಶಿಲಾ ವಿರಾಗಿಯ
ಬಳಿಗೆ
ನಾವೆಷ್ಟು ಕುಬ್ಜರು
ಅನಿಸುವುದು ಸಮಾನರಿಹರೇ….
ಬಾಹುಬಲಿಗೆ ..

ಶಂಕರ್ತಾ ಮುಂಡಾಜೆ