
ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾ ಕೇಂದ್ರದ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಭಾರತ ಸಂಸ್ಕೃತಿ ಪ್ರತಿಷ್ಠಾನ (ರಿ) ಬೆಂಗಳೂರು, ಇವರು ನವೆಂಬರ್ ತಿಂಗಳಲ್ಲಿ ನಡೆಸಿರುವ ರಾಮಾಯಣ – ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 10 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪ್ರದಾನ ಹಾಗೂ ಪರೀಕ್ಷೆ ಬರೆದ ಸಂಸ್ಥೆಯ ಸುಮಾರು 310 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಸಮಾರಂಭ ನಡೆಯಿತು. ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ MPM GFGC ನ ಪ್ರೊಫೆಸರ್ ಸುಷ್ಮಾ ಅವರು ಹಾಗೂ ಹೆಬ್ರಿಯ ದಾನಿಯಾದ ರೀನಾ ಬೀಜೂರು ಅವರು ಮಾತನಾಡಿ, ಮಕ್ಕಳಿಗೆ ಶುಭ ಹಾರೈಸಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಣವ್ ಹೆಬ್ಬಾರ್,ಕೃಷ್ಣಪ್ರಸಾದ್ ಭಟ್,ಆಯುಷ್ ಆರ್,ಶ್ರೀಗೌರಿ ಪಿ.ಕೆ,ಅಕ್ಷೋಭ್ಯ,ಸಿಂಚನ ಶೆಟ್ಟಿ,ಅಕ್ಷರ ಆರ್ ಭಟ್, ಸಿದ್ಧಾರ್ಥ್ ರಾವ್,ಸುಜಿತ್ , ತಸ್ವಿ ವಿ ಕಾಂಚನ್ ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದರು.
ಈ ಸಂದರ್ಭದಲ್ಲಿ ಪರೀಕ್ಷಾ ಸಂಯೋಜಕರಾದ ಸುಗೀತ ಮತ್ತು ಪ್ರತಿಮಾ ಉಪಸ್ಥಿತರಿದ್ದರು. ಅಮೃತಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲ ಅರುಣ್, ಮುಖ್ಯ ಶಿಕ್ಷಕಿ ಅನಿತಾ ಹಾಗೂ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.