ಮಂಗಳೂರು: ಮಂಗಳೂರಿನ ಕೆಂಜಾರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏ‌ರ್ ಇಂಡಿಯಾ ಎಕ್ ಪ್ರೆಸ್‌ ವಿಮಾನ ದುರಂತಕ್ಕೆ ಒಳಗಾಗಿ ಬುಧವಾರಕ್ಕೆ (2010 ಮೇ 22) 14 ವರ್ಷ ತುಂಬುತ್ತಿದೆ. ದುರಂತದಲ್ಲಿ ವಿಮಾನದಲ್ಲಿದ್ದ ಒಟ್ಟು 166 ಮಂದಿ ಪ್ರಯಾಣಿಕರಲ್ಲಿ 8 ಮಂದಿ ಬದುಕುಳಿದಿದ್ದರು. ಮೃತ 158 ಮಂದಿಯಲ್ಲಿ 146 ಮಂದಿ ಗುರುತು ಪತ್ತೆಯಾಗಿತ್ತು. ಉಳಿದ 12 ಮಂದಿ ಗುರುತು ಇನ್ನು ಪತ್ತೆಯಾಗಿರಲಿಲ್ಲ.