ಮೂಡುಬಿದಿರೆ :
ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ ದ.ಕ ಜಾನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ಮಾರ್ಚ್ 2 ರಂದು ಮೂಡುಬಿದಿರೆ ತಾಲೂಕು ಘಟಕದಿಂದ ಜಾನಪದ ಸಾಹಿತಿ, ಪಾಡ್ದನ, ಉಗ್ಗಪ್ಪ ಪೂಜಾರಿ ಹಾಗೂ ಜಾನಪದ ಸಾಹಿತಿ, ಬರಹಗಾರ ಸದಾನಂದ ನಾರಾವಿ ಅವರಿಗೆ ಜಾನಪದ ಕ್ಷೇತ್ರದ ಸಾಧನೆ ಗುರುತಿಸಿ ಕರ್ನಾಟಕ ಜಾನಪದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಡಾ.ರಾಜೇಶ್ ಆಳ್ವ ತುಳು ವರ್ಲ್ಡ್ ಸಂಚಾಲಕರು, ಮೂಡುಬಿದಿರೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಪರಿಷತ್ ಅಧ್ಯಕ್ಷ ಪದ್ಮ ಶ್ರೀ ಭಟ್ ನಿಡ್ಡೋಡಿ ತಿಳಿಸಿದ್ದಾರೆ.