ಮುಂಬೈ: ದೇಶದ ಮೊದಲ ಸ್ವದೇಶಿ CAR&T Cell

ಕ್ಯಾನ್ಸ‌ರ್ ಚಿಕಿತ್ಸಾ ಪದ್ಧತಿಗೆ ರಾಷ್ಟ್ರಪತಿ ದೌಪದಿ ಮುರ್ಮು ಚಾಲನೆ ನೀಡಿದರು. ಗುರುವಾರ ಮಹಾರಾಷ್ಟ್ರದ ಪೋವೈನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಇದನ್ನು ಅವರು ಲೋಕಾರ್ಪಣೆ ಮಾಡಿದರು. ಈ ಈ ಚಿಕಿತ್ಸಾ ವಿಧಾನವನ್ನು ಐಐಟಿ ಬಾಂಬೆ ಹಾಗೂ ಟಾಟಾ ಮೆಮೋ ರಿಯಲ್ ಸೆಂಟ‌ರ್ ಜಂಟಿಯಾಗಿ ಅಭಿವೃದ್ಧಿ ಗೊಳಿಸಿವೆ. ಇದರಿಂದಾಗಿ ಸುಮಾರು 4 ಕೋಟಿ ರು. ತಗುಲುತ್ತಿದ್ದ ಚಿಕಿತ್ಸಾ ವಿಧಾನ ಗಣನೀಯವಾಗಿ ಕಡಿಮೆಯಾಗಲಿದೆ. ಈ ಚಿಕಿತ್ಸಾ ವಿಧಾನದಿಂದಗಿ ಹಲವು ವಿಧದ ರಕ್ತ ಕ್ಯಾನ್ಸರ್ ಗಳನ್ನು ಗುಣಪಡಿಸಬಹುದಾಗಿದೆ. NexCAR19 CAR T&Cell ಚಿಕಿತ್ಸಾ ವಿಧಾನವು ಮೊದಲ ಸ್ವದೇಶಿ ಅಭಿವೃದ್ಧಿ ಪಡಿಸಿದ CAR T&Cell ಚಿಕಿತ್ಸಾವಿಧಾನವಾಗಿದೆ.