ಸಂಕೇಶ್ವರ : ಯುವ ನ್ಯಾಯವಾದಿ ಹಲ್ಲೆ ಮಾಡಿರುವವರ ಬಂಧನಕ್ಕೆ ವಿಳಂಬ ನೀತಿ ಹಾಗೂ ಇನ್ನುಳಿದ ಹಲ್ಲೆಕೋರರ ಬಂಧನಕ್ಕೆ ಒತ್ತಾಯಿಸಿ ಸಂಕೇಶ್ವರದ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಕೇಶ್ವರದ ನ್ಯಾಯವಾದಿಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳ ವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ನ್ಯಾಯಾಲಯದ ಕಾರ್ಯ ಕಲಾಪವನ್ನು ಬಹಿಷ್ಕಾರ ಮಾಡಿದ ಸಂಕೇಶ್ವರದ ನ್ಯಾಯವಾದಿ ಗಳು ನೇರವಾಗಿ ಸಂಕೇಶ್ವರ ಪೊಲೀಸ್ ಠಾಣೆಗೆ ಆಗಮಿಸಿ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಅಲ್ಲದೆ ಪೊಲೀಸರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ಇನ್ನುಳಿದ ಹಲ್ಲೆಕೋರರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.