Join The Telegram | Join The WhatsApp |
ಚಿಕ್ಕಮಗಳೂರು: ವಿಕ್ಟೋರಿಯಾ ರಾಣಿಯ ಕಾಲದ, ಹಿತ್ತಾಳೆಯ ಟೆಲಿಸ್ಕೋಪ್ನ್ನು ಮಾರಾಟಕ್ಕೆ ಯತ್ನಿಸಿದ ಮೈಸೂರು ಮೂಲದ ವ್ಯಕ್ತಿಯನ್ನು ಕಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮೈಸೂರಿನ ಸಂಕ್ರಾತಿ ವೃತ್ತದ ಕೆಂಪರಾಜ್ ಎಂದು ಗುರುತಿಸಲಾಗಿದೆ.
ಟೆಲಿಸ್ಕೋಪ್ ಅನ್ನು ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿಸಿದ್ದ ಕೆಂಪರಾಜ್, ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ 15 ಲಕ್ಷ ರೂಪಾಯಿಗೆ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Join The Telegram | Join The WhatsApp |