ಬೆಳಗಾವಿ :
ತಮಿಳುನಾಡಿನ ಸಾದ್ವಿ ಮಾತಾ ರಾಜಲಕ್ಷ್ಮಿ ಒಬ್ಬ ಸಾಮಾನ್ಯ ಕಾರ್ಯಕರ್ತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಧೃಡ ಸಂಕಲ್ಪದೊಂದಿಗೆ ಬೈಕ್ ನ ಮುಖಾಂತರ 62 ದಿನಗಳ 21,000 ಸಾವಿರ ಕಿಲೋಮೀಟರಗಳ ಇವರ ಪ್ರಯಾಣವು ತಮಿಳುನಾಡಿನ ಚೆನ್ನೈನಿಂದ ಪ್ರಾರಂಭವಾಗಿ ದೆಹಲಿಯವರೆಗೂ ಬೈಕ್ ರ್ಯಾಲಿಯ ಮುಖಾಂತರ ತೆರಳುತ್ತಿದ್ದಾರೆ.

ಸಾಧ್ವಿ ಮಾತಾ ರಾಜಲಕ್ಷ್ಮಿ ಅವರು ಬೆಳಗಾವಿ ನಗರಕ್ಕೆ ಆಗಮಿಸಿದ ವೇಳೆ ಅವರನ್ನು ಸ್ವಾಗತಿಸಿ ಮಾತನಾಡಿದ ಭಾಜಪ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಸುಭಾಷ್ ಪಾಟೀಲ್ ಅವರು ಸಾಧ್ವಿ ಮಾತಾ ರಾಜಲಕ್ಷ್ಮಿ ಅವರು ಆರಂಭಿಸಿರುವ ಈ ಬೈಕ್ ರ್ಯಾಲಿಯ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ಅವರೇ ಪ್ರಧಾನಿಯಾಗಬೇಕೆಂಬ ಮಾಡಿರುವ ದೃಢ ಸಂಕಲ್ಪ. ಸಾಧ್ವಿ ರಾಜಲಕ್ಷ್ಮಿ ಅವರ ದೆಹಲಿ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ನಗರದ ಕಿಲ್ಲಾ ಹತ್ತಿರ ಇರುವ ದುರ್ಗಾ ಮಂದಿರದಿಂದ ಬೈಕ್ ರಾಲಿ ಮುಖಾಂತರ ಸಾಧ್ವಿ ಮಾತಾ ರಾಜಲಕ್ಷ್ಮಿ ಅವರನ್ನು ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ್ ಚಿನ್ನಪ್ಪಗೌಡರ್, ಯುವ ಮೋರ್ಚಾ ಮಹಾನಗರ ಜಿಲ್ಲಾಧ್ಯಕ್ಷ ಮಹಾದೇವ್ ಧರೆಣ್ಣವರ, ರಾಜಶೇಖರ ಢೋನಿ, ಈರಯ್ಯ ಖೋತ್, ಸಚಿನ್ ಕಡಿ, ಬಾಳೇಶ್ ಚವ್ವನ್ನವರ್ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತದ್ದರು.