ಗೋಳಿಯಂಗಡಿ :
ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ 400
ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಹಿಲಿಯಾಣ, ಆವರ್ಸೆ, ನಂಚಾರು, ಹೆಸ್ಕುಂದ, ಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಭಾಗಗಳಿಗೆ ಸಂಬಂಧ ಪಟ್ಟಿದೆ. 11 ನೇ ವರ್ಷದ ನೇಮೋತ್ಸವದ ಪ್ರಯುಕ್ತ ಮಾರ್ಚ್ 4 ರಂದು
ಅಗಲುಸೇವೆ.ಮಾ.5 ನೇ ಮಂಗಳವಾರ ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ,ನೇಮೋತ್ಸವ,
ಶಿವರಾಯನ ಗೆಂಡಸೇವೆ, ಪರಿವಾರ ದೈವಗಳ ಕೋಲಸೇವೆಯು ನಡೆಯಲಿದೆ.

 

ಹಿನ್ನಲೆ: ಇಲ್ಲಿನ ಗರಡಿಮನೆಯಲ್ಲಿ ಕೋಟಿ-ಚೆನ್ನಯ್ಯ
ಸುರ್ಜಿಯನ್ನು ತಳವೂರಿದ ಪುಣ್ಯಸ್ಥಳ, ಗರೋಡಿಯಲ್ಲಿ
ಶ್ರೀ ಬ್ರಹ್ಮಬೈದರ್ಕಳ, ಶಿವರಾಯ ಸೇರಿದಂತೆ ಸಪರಿವಾರ ದೇವರುಗಳನ್ನು ಹಿಂದೆ ಪ್ರತಿಷ್ಠಾಪಿಸಲಾಯಿತು.
ಕಾಲಕ್ರಮೇಣ ಗರೋಡಿಯು ಅಜೀರ್ಣವಸ್ಥೆಯಿಂದ ನಾಶವಾಗಿದೆ. ಸಣ್ಣ ಚಪ್ಪರದಲ್ಲಿ ಪೂಜಾ ಕೈಂಕರ್ಯಗಳು
ನಡೆಯುತ್ತಿತು. 1961 ರಿಂದ 1986 ತನಕ ನಿತ್ಯ
ಪೂಜಾಧಿಗಳು ನಡೆಯದೇ ಗರೋಡಿ ಸಂಪೂರ್ಣ ಪಾಳು ಬಿದ್ದಿದೆ. ಊರ ಭಕ್ತಾದಿಗಳು, ದಾನಿಗಳು ಸೇರಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದಾರು. 2012 ಏ.17 ರಂದು ಕೆ. ಪ್ರತಾಪಚಂದ್ರ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಗೋಳಿಯಂಗಡಿ ಉದ್ಯಮಿ ವೈ.ಕರುಣಾಕರ ಶೆಟ್ಟಿ ಯರುಕೋಣೆ ನೇತ್ರತ್ವದಲ್ಲಿ ವೇ.ಮೂ. ಹಳ್ಳಿ ವೆಂಕಟೇಶ್ ಭಟ್ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡಿವೆ. ಕ್ಷೇತ್ರದ ಮಹಿಮೆಯಂತೆ ಊರ- ಪರವೂರ ಭಕ್ತಾದಿಗಳು,ದಾನಿಗಳ ಸಹಕಾರದಲ್ಲಿ 7 ತಿಂಗಳು 13 ದಿನಕ್ಕೆ ಗರೋಡಿ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾಪನೆಗೊಂಡಿದೆ.

ಅಭಿವೃದ್ಧಿ ಕಾರ್ಯಗಳು: ಗರೋಡಿಯ ಮುಂಭಾಗದಲ್ಲಿ ಶಾಶ್ವತ ತಗಡು ಚಪ್ಪರ, ಸ್ವಾಗತ ಗೋಪುರ, ಅವರಣಗೋಡೆ, ಬ್ರಹ್ಮಾನಂದ ರಂಗವೇದಿಕೆ, ಕೋಟಿ-ಚೆನ್ನಯ್ಯ ಭೋಜನ ಶಾಲೆ ಸೇರಿದಂತೆ
ಹಲವಾರು ಅಭಿವೃದ್ಧಿ ಕಾರ್ಯಗಳು,ಪ್ರತಿ
ಸಂಕ್ರಮಣದಂದು ಅನ್ನಸಂತರ್ಪಣೆ ಸೇವೆ ನಡೆಯುತ್ತಿದೆ.