ಮೈಸೂರು: ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಸರ್ಕಾರಿ ಕಾರು ಬಳಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸ ಬಿಎಂ ಡಬ್ಲ್ಯು ಕಾರಿನಲ್ಲಿ ಓಡಾಡಲು ಶುರು ಮಾಡಿದ್ದಾರೆ. ಶುಕ್ರ ವಾರ ಮೈಸೂರಲ್ಲಿ ಅವರು ಹೊಸ ಕಾರು ಬಳಸಿದರು. ಸಿಎಂ ಕಾರು ಬಳಸುವ ಮುನ್ನ ಭದ್ರತಾ ಸಿಬ್ಬಂದಿ ಹೊಸ ಶ್ವಾನದಳ, ಮೆಟಲ್ ಡಿಟೆಕ್ಟರ್‌ಬಳಸಿ ತಪಾಸಣೆ ಮಾಡಿದರು.