ಭಟ್ಕಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೆ ಚಕ್ರ ಹೊಂದಿದ ಸೈಕಲ್ ತುಳಿದು ಸುಮಾರು 4500ಕ್ಕಿಂತಲೂ ಅಧಿಕ ದೂರ ಪ್ರಯಾಣಿಸುವ ಸಾಹಸಕ್ಕೆ ಕೇರಳದ ಕಣ್ಣೂರಿನ 23ರ ಹರೆಯದ ಸನೀದ್ ಕೈ ಹಾಕಿದ್ದಾರೆ.

ಒಂದೇ ಚಕ್ರ ಹೊಂದಿದ ಸೈಕಲ್‌ನೊಂದಿಗೆ 3 ತಿಂಗಳ ಹಿಂದೆ ಕೇರಳದಿಂದ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ಅವರು ಒಂದೇ ಚಕ್ರದ ಸೈಕಲ್‌ ತುಳಿಯುತ್ತ ಭಟ್ಕಳಕ್ಕೆ ಬಂದಿದ್ದು, ಅಲ್ಲಿಂದ ಮುಂದಕ್ಕೆ ಸಾಗಿದ್ದಾರೆ. ಕಳೆದ ಒಂದು ವರ್ಷದಿಂದ ಒಂದೇ ಚಕ್ರದಲ್ಲಿ ಸಂಚರಿಸಲು ನಿರಂತರವಾಗಿ ಪ್ರಯತ್ನಿಸಿದ್ದ ಸನೀದ್ ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಇದೀಗ ಒಂದೇ ಟಯರ್ ಇರುವ ಸೈಕಲ್ ಮೂಲಕ ದೇಶ ಸುತ್ತುವ ಹಂತಕ್ಕೆ ಬಂದಿದ್ದಾರೆ. ಭಟ್ಕಳ ದಾಟಿರುವ ಸನಿದ್ ಸೇರಿ ಮೂವರಿದ್ದ ಯುವಕರ ತಂಡ, ಕೇರಳದ ಪ್ರತಿ ಜಿಲ್ಲೆಗೂ ತೆರಳಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.