Join The Telegram | Join The WhatsApp |
ಕಣ್ಕಲ್ ಕೇನ್ಯ-
ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕಾಯಂಬಾಡಿ,ಕಣ್ಕಲ್ ಕೇನ್ಯ ಗ್ರಾಮದಲ್ಲಿ ಜನೇವರಿ 21, ಶನಿವಾರ 65 ಕೆ. ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದ್ದು ಆ ಪ್ರಯುಕ್ತ ಇಂದು ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ಕಾಯಂಬಾಡಿ, ಕಣ್ಕಲ್ ನ ವಠಾರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ಕಬಡ್ಡಿ ಆಟಗಾರ ದರ್ನಪ್ಪ ಗೌಡ ಕಣ್ಕಲ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಗೆಳೆಯರ ಬಳಗದ ಗೌರವ ಅಧ್ಯಕ್ಷರಾದ ಯುವರಾಜ್ ಕಣ್ಕಲ್, ಅಧ್ಯಕ್ಷರಾದ ವೆಂಕಪ್ಪ ಗೌಡ ಕಾಯಂಬಾಡಿ, ಕಾರ್ಯದರ್ಶಿ ಪ್ರಶಾಂತ್ ಗೌಡ ಕಾಯಂಬಾಡಿ, ಉಪಾಧ್ಯಕ್ಷರಾದ ಗಣೇಶ್ ಆಚಾರ್ಯ ಪೇರಳಕಟ್ಟೆ, ಮೋನಪ್ಪ ಪೂಜಾರಿ, ಯಶೋದಾರ ಗೆಜ್ಜೆ , ಪ್ರಕಾಶ್ ಕಾಯಂಬಾಡಿ ಮೊದಲದವರು ಉಪಸ್ಥಿತರಿದ್ದರು.
Join The Telegram | Join The WhatsApp |