ಆರ್ಡಿ: ಶ್ರೀದುರ್ಗಾಪರಮೇಶ್ವರಿ, ಸಿದ್ಧಿವಿನಾಯಕ,ಚಿತ್ತೇರಿ ದೇವಳದಲ್ಲಿ ಕೆಂಡೋತ್ಸವ ಹಾಗೂ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.29 ನೇ ಮಂಗಳವಾರ ನಡೆಯಲಿದೆ.

ಪುರಾತನ ಕಾಲದಿಂದಲೂ ಹಿರಿಯರು ಆರಾಧಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ದೇವಳವು ಹೆರ್ಗ ವಿಠಲ ಶೆಟ್ಟಿ ಹಾಗೂ ಅವರ ಪತ್ನಿ ಕಮಲ ವಿ ಶೆಟ್ಟಿ ಹಾಗೂ ಇವರ
ಮಕ್ಕಳ ಮುಂದಾಳತ್ವದಲ್ಲಿ ಊರ-ಪರವೂರ
ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಶಿಲಾಮಯ ಗರ್ಭ ಗುಡಿ, ಮೇಲ್ಚಾವಣಿಗೆ ತಾಮ್ರದ ಹೊದಿಕೆಯೊಂದಿಗೆ ಜೀರ್ಣೋದ್ದಾರಗೊಂಡು ತಾ.೨೯.೦೪.೧೯೯೦ ರಂದು ಬ್ರಹ್ಮಕಲಶೋತ್ಸವದೊಂದಿಗೆ
ಪುನರ್ ಪ್ರತಿಷ್ಠಾಪನೆಗೊಂಡಿದೆ.
ಸಾನಿಧ್ಯಗಳು: ಶ್ರೀ ದುರ್ಗಾಪರಮೇಶ್ವರಿ, ಸಿದ್ಧಿ ವಿನಾಯಕ, ಚಿತ್ತೇರಿ, ಹೈಗುಳಿ,
ಚಿಕ್ಕು,ಕಲ್ಲುಕುಟಿಕ,ಮಾಸ್ತಿ, ನಾಗದೇವರು,ಹುಲಿ ದೇವರು, ವೀರಭದ್ರ ಹಾಗೂ ಸಪರಿವಾರ ದೇವರ
ಸಾನಿಧ್ಯಗಳಿವೆ. ಪೂಜಾ ವಿಧಿಗಳು:ಚಂಡಿಕಾ ಹೋಮ, ದುರ್ಗಾನಮಸ್ಕಾರ,ಮಂಗಳಾರತಿ,
ಕುಂಕುಮಾರ್ಚನೆ, ಹೂವಿನ ಪೂಜೆ,ರಂಗ ಪೂಜೆ,ಹರಿವಾಣ ನೈವೇದ್ಯ, ಕೆಂಡಸೇವೆ, ತುಲಾಭಾರ ಸೇವೆ, ಗಣಹೋಮ, ಸಿಂಹ ಮಾಸದಲ್ಲಿ ಸೋಣೆ ಆರತಿ, ಗಣೇಶ ಚತುರ್ಥಿ, ನವರಾತ್ರಿಯಲ್ಲಿ ವಿಶೇಷ
ಪೂಜೆಗಳು, ಇಲ್ಲಿನ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಸತತ ೪೪ ವರ್ಷಗಳಿಂದ ಭಜನಾ ಕಾರ್ಯಕ್ರಮ ನಡೆದು ಬಂದಿರುತ್ತದೆ. ಇಲ್ಲಿ
ಬೆಳಿಗ್ಗೆ ಹಾಗೂ ರಾತ್ರಿ ನಿತ್ಯ
ಪೂಜೆಗಳು,ಮದುವೆ,ಇನ್ನಿತರ ಧಾರ್ಮಿಕ
ಕಾರ್ಯಕ್ರಮಗಳು ನಡೆಯುತ್ತವೆ. ದೇವಳದ
ಸಮೀಪದಲ್ಲಿ ಆತ್ಯಾಧುನಿಕ ವ್ಯವಸ್ಥೆಗಳನ್ನು
ಹೊಂದಿದ ವಿಶಾಲವಾದ ಕಮಲ ವಿಠ್ಠಲ ಸಭಾಭವನವನ್ನು ಹೊಂದಿದೆ. ಕೆಂಡೋತ್ಸವದಂದು ಇಲ್ಲಿ ನಡೆಯುವ
ಕಲ್ಲುಕುಟಿಗನ ಕೋಲವು ಹಿಂದಿನಿಂದಲೂ ಬಹಳ ವಿಶೇಷತೆಯನ್ನು ಪಡೆದಿದೆ. ಪುರಾತನ ಕಾಲದಲ್ಲಿ ಮೂಡಿ ಬಂದ ಇಲ್ಲಿನ ಚಿತ್ತೇರಿ ದೇವರ ವಾಲ್ಮೀಕ (ಹುತ್ತ)
ಆಳತ್ತೇರಕ್ಕೆ ಬೆಳೆದಿರುವುದು ಇಲ್ಲಿನ ವಿಶೇಷ
ಆಕರ್ಷಣೆ ಹಾಗೂ ಸುತ್ತ ಮುತ್ತಲಿನ ಭಾಗಗಳಲ್ಲಿ “ಚಿತ್ತೇರಿ ಹಬ್ಬ”ವೆಂದು ಬಹು ಪ್ರಸಿದ್ಧಿ ಪಡೆದಿದೆ.

29 ರಂದು ಬೆಳಿಗ್ಗೆ ಗಂ ೮ ಕ್ಕೆ ಪುಣ್ಯಾಹ,ನವಕಪ್ರಧಾನಹೋಮ,ಕಲಶಾಭಿಷೇಕ, ಗಂ ೮.೩೦ ಕ್ಕೆ ಗಣಹೋಮ,ಗಂ ೧೦ ಕ್ಕೆ ತುಲಾಭಾರ ಸೇವೆಗಳು,ಹರಿವಾಣ
ನೈವೇದ್ಯ, ಗಂ ೧೨ ಕ್ಕೆ ಮಹಾಪೂಜೆ,ಗಂ ೧ ರಿಂದ ಅನ್ನಸಂತರ್ಪಣೆ,ರಾತ್ರಿ ಗಂ ೭.೩೦ ರಿಂದ ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ
ಪ್ರಾಯೋಜಕತ್ವದಲ್ಲಿ ವಿದುಷಿ ಅಮೃತಾ ಉಪಾಧ್ಯ ನೇತ್ರತ್ವದಲ್ಲಿ ಈಶ ಲಾಸ್ಯ ನೃತ್ಯ ತಂಡ ಸಾಲಿಗ್ರಾಮ ಇವರಿಂದ ಮನಮೋಹಕ ಗಾನ ನೃತ್ಯ ವೈಭವ-೨೦೨೫
ಸಾಂಸ್ಕೃತಿಕಾ ಕಾರ್ಯಕ್ರಮ,ಗಂ ೧೧ ಕ್ಕೆ ಕೆಂಡಸೇವೆ, ಗಂಟೆ ೧೨ ಕ್ಕೆ ರಂಗಪೂಜೆ,ಗಂಟೆ ೧ಕ್ಕೆ ಢಕ್ಕೆ
ಬಲಿ,ದರ್ಶನ,ಬಲಿ, ಗಂ ೨ ಕ್ಕೆ ಕಲ್ಲುಕುಟಿಗನ ಕೋಲ, ಎ.೩೦ ರ ಮುಂಜಾನೆ ಗಂ ೫ ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.