ಅತ್ಯಂತ ಪ್ರಾಚೀನ ಹಾಗೂ ವಿಶ್ವದ ಅತ್ಯಂತ ಸಿರಿವಂತ ದೇಗುಲಗಳ ಪೈಕಿ ಒಂದಾದ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡ ಗ್ರಾಮದ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ. ಅಡ್ಡೆ ಸುಬ್ರಾಯ ತೋಡ್ತಿಲ್ಲಾಯ ಮತ್ತು ಯಶೋದಾ ದಂಪತಿಯ ಪುತ್ರರಿವರು. ಕೊಕ್ಕಡ, ನೆಲ್ಯಾಡಿ, ಉಪ್ಪಿನಂಗಡಿಗಳಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಇವರು, ಸತೀಶ ಯಡಪಡಿತ್ತಾಯರ ಬಳಿ ವೇದಾಧ್ಯಯನ ನಡೆಸಿ ಬೆಂಗಳೂರಿನಲ್ಲಿ ವೈದಿಕ ವಿದ್ವಾಂಸರಾಗಿದ್ದರು. ಈಗ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದು, ಶನಿವಾರವೇ ಅಧಿಕಾರ ಸ್ವೀಕರಿಸಿದ್ದಾರೆ.