ಬೆಳಗಾವಿ : ಟಿಳಕವಾಡಿ ಸೋಮವಾರಪೇಟೆ ಪಾಟೀಲ ಡೈರಿ ಎದುರುಗಡೆ ಸದಾ ಚಿನ್ಮಯ ಸೌಹಾರ್ದ ಸಹಕಾರಿ ಬ್ಯಾಂಕಿನ ಎರಡನೇ ಶಾಖೆಯ ಉದ್ಘಾಟನೆ ನೆರವೇರಿತು.

ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಪೂಜ್ಯ ಸ್ವಾಮಿ ನವದುರ್ಗಾನಂದಜೀ ಮಹಾರಾಜ ಅವರು ಶುದ್ಧ ಮನಸ್ಸಿನಿಂದ ಮಾಡುವ ಕಾರ್ಯಗಳು ಇಂತಹ ಯಶಸ್ಸನ್ನು ತಂದುಕೊಡುತ್ತವೆ ಎಂದರು.

ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ, ಕೆವಿಜಿ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಪಿ.ವಿ.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಯಾಂಕ್ ಅಧ್ಯಕ್ಷ ಭೀಮಗೌಡ ಪೊಲೀಸಗೌಡರ್ ಅವರು ಶುಭ ಹಾರೈಸಿದರು. ನಿರ್ದೇಶಕರು ಹಾಗೂ ಮಾರ್ಗದರ್ಶಕರು, ಸಮಾಜ ಸೇವಕ ಪ್ರವೀಣ್ ಕುಮಾರ್ ಚಿಕ್ಕಲಿ ಅವರು ಬ್ಯಾಂಕಿನ ನಿಯಮಗಳು ಹಾಗೂ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಮಲ್ಲಿಕಾರ್ಜುನ ಗುನುಗೊಳ್ ಅವರು ಈ ಶಾಖೆ ತಮ್ಮೆಲ್ಲರ ಸೇವೆಗೆ ಸದಾ ಸನ್ನದ್ಧವಾಗಿರುತ್ತದೆ. ಯುವಕರ ಅಭಿವೃದ್ಧಿ ನಮ್ಮ ಗುರಿ. ಯುವಕರಿಗಾಗಿ ನಾವು ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಯಾವಾಗಲೂ ಸಿದ್ದ ಎಂದರು.

ಸಂಸ್ಥೆಗಾಗಿ ದುಡಿದ ಪ್ರಮುಖರಿಗೆ ಸತ್ಕಾರ ಮಾಡಲಾಯಿತು.

ಕಾರ್ಯಕ್ರಮಕ್ಕೆ ಬೆಳಗಾವಿಯ ವಿವಿಧ ಭಾಗಗಳಿಂದ 250 ಕ್ಕೂ ಹೆಚ್ಚು ಜನ ಆಗಮಿಸಿದ್ದರು.