ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕೆಎಲ್‌ಎಸ್ ಗೋಗಟೆ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಶೋಧನಾ ವಿದ್ಯಾರ್ಥಿನಿ ಶಿಲ್ಪಾ ಯಕ್ಕೇರಿಮಠ ಅವರ ಸಂಶೋಧನಾ ಪ್ರಬಂಧ “ಸರ್ಫೇಸ್ ವಾಟರ್ ಕ್ವಾಲಿಟಿ ಇವ್ಯಾಲ್ವೇಷನ್ ಆಂಡ್ ಅಡ್ವಾರ್ಪ್ಟನ್ ಕ್ಯಾರೆಕ್ಟರಿಸ್ಟಿಕ್ಸ್‌ ಆಫ್ ಸ್ವಾಯಿಲ್ ಇನ್ ಪಾರ್ಟ್ಸ್ ಆಫ್ ಪಂಚಗಂಗಾ ರಿವರ್ ಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ಶ್ರೀಮತಿ ಶಿಲ್ಪಾ ಯಕ್ಕೇರಿಮಠ ಇವರು ಡಾ. ಸಂಜಯಕುಮಾರ ವಿ ದಿವೇಕರ ಹಾಗೂ ಡಾ.ರವಿರಾಜ ಎಮ್ ಕುಲಕರ್ಣಿ, ಕೆಮಿಸ್ಟ್ರಿ ವಿಭಾಗ, ಕೆಎಲ್‌ಎಸ್. ಗೋಗಟೆ ಇನ್‌ಸ್ಟಿಟ್ಯುಟ ಆಫ್ ಟೆಕ್ನಾಲಜಿ ಬೆಳಗಾವಿ ಇವರ ಮಾರ್ಗದರ್ಶನದಡಿ ಪಿಎಚ್ ಡಿ ಕೈಕೊಂಡಿರುತ್ತಾರೆ. ಡಾ. ಬಿ ಕೆ ಪುರಂದರ, ಸೈಂಟಿಸ್ಟ್ (ನಿವೃತ್ತ) ನ್ಯಾಶನಲ್ ಇನ್ಸಿಟ್ಯುಟ್ ಆಫ್ ಹೈಡ್ರಾಲಜಿ, ಬೆಳಗಾವಿ ಮಾರ್ಗದರ್ಶನ ನೀಡಿದ್ದಾರೆ

ಶ್ರೀಮತಿ ಶಿಲ್ಪಾ ಯಕ್ಕೇರಿಮಠ ಇವರು ಮೂಲತಃ ಸವದತ್ತಿಯವರಾಗಿದ್ದು, ಪ್ರಸ್ತುತ ಸಿ ಬಿ ಹಿರೇಮಠ ಅಧೀಕ್ಷಕ ಇಂಜನೀಯರರು(ನಿವೃತ್ತ) ಇವರ ಕುಟುಂಬ ಸದಸ್ಯರಾಗಿ ಬೆಳಗಾವಿಯಲ್ಲಿದ್ದಾರೆ.