ಬೆಳಗಾವಿ: ಬೆಳಗಾವಿ ತಾಲೂಕಿನ‌ ಸುಪ್ರಸಿದ್ಧ ಕ್ಷೇತ್ರವಾದ ಸುಳೇಭಾವಿ ಶ್ರೀ ಮಹಾಲಕ್ಷ್ಮಿ ದೇವಿ ಮಂದಿರದಲ್ಲಿ 2025 ರ ಜಾತ್ರಾ ಪ್ರಯುಕ್ತವಾಗಿ ಮತ್ತು ದೇವಿಯ ಪ್ರಾಬಲ್ಯತೆ- ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಷಯ ಹೋಮಗಳನ್ನು ಜರುಗಿಸಲಾಯಿತು.

ದೇವಿಯ ಕಾಳಾವಾಹನೆ, ಪ್ರತ್ಯಂಗಿರಾ ಹೋಮ ಹಾಗೂ ಶ್ರೀ ಭದ್ರಕಾಳಿ ಗುರುತಿ ಪೂಜೆಯನ್ನು ಕೇರಳ ಮೂಲದ ಶ್ರೀ ಭಗವತಿ ಎನ್. (ಪಾಲ್ಕಡ್ ಕೇರಳ) ಇವರ ನೇತೃತ್ವದಲ್ಲಿ ಹಾಗೂ ಪೂಜಾರಿಗಳು ಮತ್ತು ಟ್ರಸ್ಟ್ ಕಮಿಟಿ ಅವರಿಂದ ನೆರವೇರಿಸಲಾಯಿತು.
ದೇವಿಯ ಭಕ್ತಾದಿಗಳು ಮತ್ತು ಗ್ರಾಮದ ಸಮಸ್ತ ಗುರು ಹಿರಿಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.