This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಆಶಾಕಿರಣ ಮೂಡಿಸಿದ ಸುಧೀರ ಗಡ್ಡೆ

Join The Telegram Join The WhatsApp

ಬೆಳಗಾವಿ :

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಮುಖಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಚರ್ಚೆ ಬಿರುಸಾಗಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಇರುವಂತೆ ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕ ಸುಧೀರ ಗಡ್ಡೆ ಹೆಸರು ಮುಂಚೂಣಿಯಲ್ಲಿ ತೇಲಿ ಬಂದಿದೆ.

ಪಕ್ಷ ನಡೆಸಿದ ಸಮೀಕ್ಷೆಯೂ ಸಹಾ ಸುಧೀರ ಗಡ್ಡೆ ಅವರ ಪಾಲಿಗೆ ವರವಾಗಿ ಪರಿಣಮಿಸಿದೆ. ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಈ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನವಚೈತನ್ಯ ತಂದು ಕೊಡುವ ವರ್ಚಸ್ವಿ ನಾಯಕತ್ವ ಸುಧೀರ ಗಡ್ಡೆ ಅವರಲ್ಲಿ ಪಕ್ಷ ಕಂಡುಕೊಂಡಿರುವುದು ವಿಶೇಷವಾಗಿದೆ.

ಧರ್ಮ, ಜಾತಿ ಮೀರಿ ಎಲ್ಲ ಸಮಾಜದ ಜನರ ಏಳ್ಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಸುಧೀರ ಗಡ್ಡೆ ಅವರು ಉತ್ತರ ಮತಕ್ಷೇತ್ರಕ್ಕೆ ಹೇಳಿ ಮಾಡಿಸಿದ ಅಭ್ಯರ್ಥಿ ಆಗಿದ್ದು ದಿನದಿಂದ ದಿನಕ್ಕೆ ಜನಾಭಿಪ್ರಾಯ ಅಧಿಕವಾಗುತ್ತಿರುವುದು ಕಂಡು ಬರುತ್ತಿದೆ.

ಕಾಂಗ್ರೆಸ್ ನಲ್ಲಿ ಅನೇಕ ಆಕಾಂಕ್ಷಿಗಳು ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ರಾಜ್ಯ ರಾಜಕಾರಣದಿಂದ ಹೈಕಮಾಂಡ್ ವರೆಗೂ ತಮ್ಮದೇ ಆದ ವರ್ಚಸ್ಸು ತೋರಿಸುತ್ತಿದ್ದಾರೆ. ಆದರೆ ಹೈಕಮಾಂಡ್ ಅಂಡರ್ ಗ್ರೌಂಡ್ ಸರ್ವೇ ನಡೆಸುತ್ತಿದ್ದು, ಜನಬೆಂಬಲ ಇರುವ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಸುಧೀರ ಗಡ್ಡೆ ಹೆಸರು ಕೇಳಿ ಬರುತ್ತಿದೆ. ನಂತರದಲ್ಲಿ ಫಿರೋಜ ಸೇಠ ಹಾಗೂ ಅಜೀಮ್ ಪಟವೇಗಾರ ಹೆಸರೂ ಹರಿದಾಡುತ್ತಿವೆ.

ಫೀರೋಜ್ ಸೇಠ ಅಥವಾ ಅಜೀಮ್ ಪಟವೇಗಾರಗೆ ಟಿಕೆಟ್ ನೀಡಿದರೆ ಒಂದೇ ಸಮುದಾಯದ ಮತಗಳು ಕಾಂಗ್ರೆಸ್ ಗೆ ಸಿಗಬಹುದು.‌ ಬೇರೆ ಜಾತಿಯ ಮತಗಳು ಕಾಂಗ್ರೆಸ್ ನಿಂದ‌ ಕೈ ತಪ್ಪುವ ಆತಂಕ‌ ಇದೆ. ಇದರ ಲಾಭ ಬಿಜೆಪಿ ಸುಲಭವಾಗಿ ಪಡೆದುಕೊಳ್ಳುತ್ತದೆ. ಆದ್ದರಿಂದ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಮುಸ್ಲಿಂ ಹೊರತುಪಡಿಸಿ ಬೇರೆ ಸಮಾಜದ ವ್ಯಕ್ತಿಗೆ ಟಿಕೆಟ್ ಕೊಟ್ಟು ಎಲ್ಲ ವರ್ಗದ ಮತದಾರರನ್ನು ಸೆಳೆಯುವ ಲೆಕ್ಕಾಚಾರ ಕಾಂಗ್ರೆಸ್ ವರಿಷ್ಠರದ್ದಾಗಿದೆ.

ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸೂಕ್ತ ಅಭ್ಯರ್ಥಿ ಬೇಕೆಂಬ ಅಂತಿಮ ತೀರ್ಮಾನಕ್ಕೆ ಕಾಂಗ್ರೆಸ್ ವರಿಷ್ಠರು ಬಂದಿದ್ದು, ಹೀಗಾಗಿ ಮರಾಠಾ, ಲಿಂಗಾಯತ, ಮುಸ್ಲಿಂ, ಎಸ್ ಸಿ, ಎಸ್ಟಿ ಸಮಾಜದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಅಭ್ಯರ್ಥಿಯ ಶೋಧ ನಡೆಸುತ್ತಿದ್ದಾರೆ.‌ ಇದರಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕ್ಷೇತ್ರದ ತುಂಬೆಲ್ಲ ಆಂತರಿಕ ಸರ್ವೇ ನಡೆಸಿದಾಗ ಸುಧೀರ ಗಡ್ಡೆ ಅಭ್ಯರ್ಥಿ ಆಗಲಿ ಎಂಬ ಮಾಹಿತಿ ಸಿಕ್ಕಿದೆ.

ಒಟ್ಟಾರೆ, ಸುಧೀರ ಗಡ್ಡೆ ಅವರಿಗೆ ಪಕ್ಷ ಟಿಕೆಟ್ ನೀಡಿದಲ್ಲಿ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ನಿರಾಯಾಸವಾಗಿ ಗೆಲುವು ತಂದು ಕೊಡುತ್ತಿದ್ದ ಈ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸುವುದು ಬಹುತೇಕ ಖಚಿತ ಎನ್ನುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.


Join The Telegram Join The WhatsApp
Admin
the authorAdmin

Leave a Reply