
ಬೆಳಗಾವಿ : ಪ್ರಸ್ತುತ ೨೦೨೪-೨೫ ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ದಿನಾಂಕ: ೧೬.೦೨.೨೦೨೫ ರಂದು ಸಂಜೆ ೬:೦೦ ಘಂಟೆಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಕಾರಣ, ತಾವು ಸದರಿ ಹಂಗಾಮಿಗಾಗಿ ನೊಂದಣಿ ಮಾಡಿದಂತಹ ಎಲ್ಲ ಕಬ್ಬನ್ನು ನಮ್ಮ ಕಾರ್ಖಾನೆಯ ಕ್ಷೇತ್ರ ಸಿಬ್ಬಂದಿಗಳನ್ನು ಸಂಪರ್ಕಿಸಿ ಕಟಾವು ಮಾಡಿ ತಮ್ಮ ಸ್ವಂತ ವಾಹನದಿಂದ ಅಥವಾ ಕರಾರು ಮಾಡಲಾದ ವಾಹನ ಹಾಗೂ ಗ್ಯಾಂಗಗಳ ಮೂಲಕ ದಿನಾಂಕ: ೧೬.೦೨.೨೦೨೫ ರಂದು ಸಂಜೆ ೬:೦೦ ಘಂಟೆಯ ಒಳಗಾಗಿ ಕಾರ್ಖಾನೆಗೆ ಪೂರೈಕೆ ಮಾಡಲು ವಿನಂತಿಸಲಾಗಿದೆ. ಸದರಿ ದಿನಾಂಕದೊಳಗೆ ಕಾರ್ಖಾನೆಗೆ ಪೂರೈಕೆಯಾಗದೆ ಉಳಿದ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿಯಾಗಿರುವುದಿಲ್ಲ.
ಪ್ರಸಕ್ತ ೨೦೨೪-೨೫ ನೇ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಿದ ಸಮಸ್ತ ರೈತ ಬಾಂಧವರಿಗೆ, ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಕ್ತೆದಾರರಿಗೆ ಮತ್ತು ಕಾರ್ಖಾನೆಯ ಎಲ್ಲ ಅಧಿಕಾರಿಗಳಿಗೆ, ಕಾರ್ಮಿಕ ಮತ್ತು ಸಿಬ್ಬಂದಿ ವರ್ಗದವರಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಇದೇ ರೀತಿಯ ಸಹಾಯ ಸಹಕಾರವನ್ನು ಮುಂಬರುವ ಹಂಗಾಮುಗಳಲ್ಲಿಯೂ ಕೂಡಾ ನೀಡುವಿರೆಂದು ಆಶಿಸುತ್ತೇವೆ ಎಂದು ಬೆಳಗಾಂ ಶುಗರ್ಸ್ ಪ್ರೈ ಲಿ ಪ್ರಕಟಣೆಯಲ್ಲಿ ತಿಳಿಸಿದೆ.