ಬೆಳಗಾವಿ : ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಂ.ಕೆ. ಹುಬ್ಬಳ್ಳಿ ಬಳಿ ಹರಿಯುವ ಮಲಪ್ರಭಾ ನದಿ ಇದೀಗ ಮೈತುಂಬಿ ಹರಿಯುತ್ತಿದೆ. ಜಗಜ್ಯೋತಿ ಬಸವೇಶ್ವರರ ಧರ್ಮಪತ್ನಿ ಶರಣೆ ಗಂಗಾಂಬಿಕೆ ಐಕ್ಯ ಮಂಟಪ ಮಲಪ್ರಭಾ ನದಿಯಲ್ಲಿದ್ದು ಇದು ಈಗ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಲಪ್ರಭೆ ತುಂಬಿಕೊಂಡಿರುವುದರಿಂದ ಇದೀಗ ಗಂಗಾಂಬಿಕೆಯ ಐಕ್ಯಮಂಟಪದ ಸುತ್ತಲೂ ನೀರು ಆವರಿಸಿಕೊಂಡಿದೆ. ನದಿ ಮಧ್ಯೆ ಇರುವ ಐಕ್ಯಮಂಟಪದ ಸುತ್ತ ರಮಣೀಯ ದೃಶ್ಯ ಕಂಡು ಬಂದಿದೆ. ಪಶ್ಚಿಮ ಘಟ್ಟದಲ್ಲಿ ಇದೀಗ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಮಲಪ್ರಭೆ ಜೀವ ಕಳೆ ಪಡೆದುಕೊಂಡಿದ್ದು ಮಳೆಗಾಲದ ಐಸಿರಿ ಇಲ್ಲಿ ಒಡಮೂಡಿದೆ.