ಹೆಬ್ರಿ : ಮುದ್ರಾಡಿಯ ಬಲ್ಲಾಡಿಯಲ್ಲಿ ರವಿವಾರ ಮಳೆಯ ಅರ್ಭಟಕ್ಕೆ ಕೊಚ್ಚಿ ಹೋಗಿದ್ದ ನೇರಲ್ಪಕ್ಕೆ ನಿವಾಸಿ 85ರ ವರ್ಷದ ಚಂದ್ರಗೌಡ್ತಿ ಅವರ ಶವ ಪತ್ತೆಯಾಗಿದೆ. ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಸೋಮವಾರದಂದು ದೂರದ ಗದ್ದೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.