
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ ಮೂರ್ತಿ ಅನಾವರಣಗೊಳಿಸಿದರು.ಡಾ.ಕಿರಣ ಕೋಲ್ಕಾರ್ ಅಧ್ಯಕ್ಷತೆ ವಹಿಸಿದ್ದರು.
ಡಾ.ಅನ್ನಪೂರ್ಣ ಕೋಲಕಾರ್, ಶ್ರೀ ಸತೀಶ್ ಆರ್ ಚೌಲಿಗರ, ಉಳವಪ್ಪ ಮಲ್ಲಣ್ಣವರ, ನಾಗೇಶ ದೇಸಾಯಿ, ಗುಂಡು ತಳವಾರ, ಮಹಾದೇವ ತಳವಾರ, ಅಶೋಕ ಕೋಲಕಾರ, ಪ್ರವೀಣ ಕೋಲಕಾರ, ಸಾಯಿ ಹಿಡಕಲ್, ಪಾರೇಶ ಕೋಲಕಾರ, ಶಂಕರ ಮಲಣ್ಣವರ, ಮಲ್ಲೇಶ್ ಚೌಗುಲೆ, ರಾಕೇಶ್ ಹಿರೇಮಠ್, ಸದಾಶಿವ ಗಸ್ತಿ, ಸವಿತಾ ಕೋಲಕಾರ, ಚನ್ನಪ್ಪ ಹಿರೇಹೊಳಿ, ದೇವೇಂದ್ರ ಕೋಲಕಾರ, ಡಿ.ಎಸ್.ಎಸ್ ಭೀಮವಾದ ಮತ್ತು ಬೆಳಗಾವಿ ಎಲ್ಲ ದಲಿತ ಸಂಘಟನೆಗಳು ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.