ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹೊರತುಪಡಿಸಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಒಟ್ಟು 72 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಇದರಲ್ಲಿ 30 ಕ್ಯಾಬಿನೆಟ್ ಸಚಿವರು, ಐದು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರಾಗಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಕೇಂದ್ರ ರಕ್ಷಣಾ ಸಚಿವ ಸ್ಥಾನವನ್ನು ಅಲಂಕರಿಸಿದ್ದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ ಈ ಹಿಂದೆ ಹಣಕಾಸು ಖಾತೆಯನ್ನು ಹೊಂದಿದ್ದ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವರಾಗಿದ್ದ ಡಾ ಎಸ್ ಜೈಶಂಕರ್ ಅವರು ಸಹ ಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾರ್ಚ್‌ನಲ್ಲಿ ಹರಿಯಾಣ ಮಾಜಿ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್, ಜೆಡಿಎಸ್ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ, ಪಿಯೂಷ್ ಗೋಯಲ್ , ಧರ್ಮೇಂದ್ರ ಪ್ರಧಾನ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಯು ನಾಯಕ ರಾಜೀವ್ ರಂಜನ್ (ಲಾಲನ್) ಸಿಂಗ್ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವರು
ರಾಜನಾಥ ಸಿಂಗ್ (ಬಿಜೆಪಿ)
ಅಮಿತ್ ಶಾ (ಬಿಜೆಪಿ)
ನಿತಿನ್ ಗಡ್ಕರಿ (ಬಿಜೆಪಿ)
ಜೆ.ಪಿ. ನಡ್ಡಾ (ಬಿಜೆಪಿ)
ಶಿವರಾಜ ಸಿಂಗ್ ಚೌಹಾಣ (ಬಿಜೆಪಿ)
ನಿರ್ಮಲಾ ಸೀತಾರಾಮನ್ (ಬಿಜೆಪಿ)
ಎಸ್. ಜೈಶಂಕರ (ಬಿಜೆಪಿ)
ಮನೋಹರ ಲಾಲ ಖಟ್ಟರ್ (ಬಿಜೆಪಿ)
ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್‌)
ಪಿಯೂಷ್ ಗೋಯಲ್ (ಬಿಜೆಪಿ)
ಧರ್ಮೇಂದ್ರ ಪ್ರಧಾನ (ಬಿಜೆಪಿ)
ಜಿತನ್ ರಾಮ್ ಮಾಂಝಿ (ಎಚ್‌ಎಎಂ)
ರಾಜೀವ ರಂಜನ ಸಿಂಗ್ ಅಲಿಯಾಸ್ ಲಲ್ಲನ್‌ ಸಿಂಗ್ (ಜೆಡಿಯು)
ಸರ್ಬಾನಂದ ಸೋನೋವಾಲ್ (ಬಿಜೆಪಿ)
ಡಾ ವೀರೇಂದ್ರ ಕುಮಾರ (ಬಿಜೆಪಿ)
ಕಿಂಜರಾಪು ರಾಮ ಮೋಹನ ನಾಯ್ಡು (ಟಿಡಿಪಿ)
ಪ್ರಹ್ಲಾದ ಜೋಶಿ (ಬಿಜೆಪಿ)
ಜುಯಲ್ ಓರಮ್ (ಬಿಜೆಪಿ)
ಗಿರಿರಾಜ ಸಿಂಗ್ (ಬಿಜೆಪಿ)
ಅಶ್ವಿನಿ ವೈಷ್ಣವ (ಬಿಜೆಪಿ)
ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)
ಭೂಪೇಂದರ ಯಾದವ್ (ಬಿಜೆಪಿ)
ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)
ಅನ್ನಪೂರ್ಣ ದೇವಿ (ಬಿಜೆಪಿ)
ಕಿರಣ ರಿಜಿಜು (ಬಿಜೆಪಿ)
ಹರ್ದೀಪ್ ಸಿಂಗ್ ಪುರಿ (ಬಿಜೆಪಿ)
ಮನ್ಸುಖ್ ಮಾಂಡವಿಯಾ (ಬಿಜೆಪಿ)
ಜಿ ಕಿಶನ್ ರೆಡ್ಡಿ (ಬಿಜೆಪಿ)
ಚಿರಾಗ ಪಾಸ್ವಾನ್ (ಎಲ್‌ಜೆಪಿ)
ಸಿ.ಆರ್. ಪಾಟೀಲ (ಬಿಜೆಪಿ)
ರಾವ್ ಇಂದ್ರಜಿತ್ ಸಿಂಗ್ (ಬಿಜೆಪಿ)
ಜಿತೇಂದ್ರ ಸಿಂಗ್ (ಬಿಜೆಪಿ)
ಅರ್ಜುನ್ ರಾಮ ಮೇಘವಾಲ್ (ಬಿಜೆಪಿ)
ಪ್ರತಾಪರಾವ್ ಗಣಪತರಾವ್ ಜಾಧವ್ (ಶಿವಸೇನೆ)
ಜಯಂತ ಚೌಧರಿ (ಆರ್‌ಎಲ್‌ಡಿ)
ಜಿತಿನ್ ಪ್ರಸಾದ (ಬಿಜೆಪಿ)
ಶ್ರೀಪಾದ್ ನಾಯ್ಕ (ಬಿಜೆಪಿ)
ಪಂಕಜ ಚೌಧರಿ (ಬಿಜೆಪಿ)
ಕಿಶನ್ ಪಾಲ ಗುರ್ಜರ್ (ಬಿಜೆಪಿ)
ರಾಮದಾಸ್ ಅಠವಳೆ (ಆರ್‌ಪಿಐ)
ರಾಮನಾಥ ಠಾಕೂರ್ (ಜೆಡಿಯು)
ನಿತ್ಯಾನಂದ ರೈ (ಬಿಜೆಪಿ)
ಅನುಪ್ರಿಯಾ ಪಟೇಲ್ (ಅಪ್ನಾ ದಳ)
ವಿ ಸೋಮಣ್ಣ (ಬಿಜೆಪಿ)
ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)