ಬೆಳಗಾವಿ : ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿ ಸಮಗ್ರ ಬೆಳಗಾವಿಯ ರಸ್ತೆ ಅಭಿವೃದ್ಧಿಗಳ ಕುರಿತು ಮನವಿ ಸಲ್ಲಿಸಿದರು.

1) ಬೆಳಗಾವಿ ತಾಲೂಕಿನ ಜಡಶಹಾಪುರ- ಹೊನಗಾ ನಡುವೆ ನಿರ್ಮಾಣ ಹಂತದಲ್ಲಿರುವ ಬೈಪಾಸ್ ರಸ್ತೆ ( ರಿಂಗ್ ರೋಡ್) ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಮನವಿಯಲ್ಲಿ ತಿಳಿಸಿದರು.

ಅದರಂತೆ ಬೆಳಗಾವಿ(ಶಗಣಮಟ್ಟಿ)-ಹುನಗುಂದ-ರಾಯಚೂರು ನಡುವೆಯೂ ನಿರ್ಮಾಣಗೊಳ್ಳುತ್ತಿರುವ ರಸ್ತೆಯ ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿಯಲ್ಲಿ ತಿಳಿಸಿದರು.

2) ಬೆಳಗಾವಿ ನಗರಕ್ಕೆ ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿ -4 ಯಿಂದ ಸೇರುವ ಅಪ್ರೋಚ ರಸ್ತೆ ಅಶೋಕ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ “ಪ್ಲೈಓವರ್ ನಿರ್ಮಾಣ ಮತ್ತು ಈ ಕುರಿತು ಕರ್ನಾಟಕ ರಾಜ್ಯ ಸರಕಾರವು ಈಗಾಗಲೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ರೂ: 600 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

3) “ಕೇಂದ್ರ ರಸ್ತೆ ಸುಧಾರಣೆ ನಿದಿ”ಯೋಜನೆಯಡಿ ಗೋಕಾಕ ಫಾಲ್ಸ್ ಹತ್ತಿರ ಕೇಬಲ್ ಕಾರ್” ನಿರ್ಮಿಸಲು ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

4) ಐತಿಹಾಸಿಕ ಕಿತ್ತೂರು ಪಟ್ಟಣ ದಿಂದ ಬೈಲಹೊಂಗಲ ಪಟ್ಟಣ ನಡುವೆ ರಸ್ತೆ ಸುಧಾರಣೆಗೆ ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ರೂ: 160 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ ಮನವಿ ಸಲ್ಲಿಸಿದರು.

5) ಮೂಡಲಗಿ ಹಾಗೂ ಸಂಕೇಶ್ವರ ರಾಜ್ಯ ಹೆದ್ದಾರಿ-44 ( ಚೈನೇಜ್ 35.54 ರಿಂದ 81.54 ) 46 ಕಿ ಮೀ ಅಂತರ ರಸ್ತೆ ಅಭಿವೃದ್ಧಿ ಗೊಳಿಸುವುದು (ಪ್ಯಾಕೇಜ್) (Rigid Pavements Two Lanes + Paved Shoulders)

6) ಅದರಂತೆ ನರಸಾಪೂರ-ಹೊಸಕೋಟಿ-ಬುದ್ದಿ-ಯಾದವಾಡ (ಜಿಲ್ಲಾ ಮುಖ್ಯ ರಸ್ತೆ) ಯನ್ನು ಸಿಮೆಂಟ್ ಫ್ಯಾಕ್ಟರಿ ಸೇರುವ ರಸ್ತೆದಿಂದ ಮೂಡಲಗಿ- ಸಂಕೇಶ್ವರ ರಾಜ್ಯ ಹೆದ್ದಾರಿ-44 ಸೇರುವ ಸುಮಾರು 6 ಕಿ ಮೀ ಅಂತರ ರಸ್ತೆ ಅಭಿವೃದ್ಧಿ ಗೊಳಿಸುವುದು (ಪ್ಯಾಕೇಜ್ -2) (Rigid Pavements Two Lanes + Paved Shoulders).

‘ಸಾರ್ವಜನಿಕರ ಹಿತಾ ದೃಷ್ಟಿಯಿಂದ ಮೇಲೆ ಪ್ರಸ್ತಾಪಿತ ಎಲ್ಲ ಕಾಮಗಾರಿಗಳೆಗೆ ಅಗತ್ಯ ಅನಮೋದನೆ ವ ಅನುದಾನ ನೀಡುವ ಬಗ್ಗೆ ಮತ್ತು ಕಾಮಗಾರಗಳನ್ನು ಕೂಡಲೆ ಕೈಗೆತ್ತಿ ಕೊಳ್ಳುವ ಬಗ್ಗೆ ಅಗತ್ಯ ಕ್ರಮಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ ಗಡಕರಿ ಅವರನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಕೋರಿದರು.