ದೆಹಲಿ :
ಮಹಾರಾಷ್ಟ್ರದ ಉಪಮುಖ್ಯಮಂತ್ರಿ
ಅಜಿತ್ ಪವಾರ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗವು ತಿಳಿಸಿದ್ದು ಇದು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್‌ಗೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.

6 ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ತೀರ್ಪು ನೀಡಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯಲ್ಲಿನ ವಿವಾದವನ್ನು ಇಸಿ ಇತ್ಯರ್ಥಪಡಿಸಿದೆ.

ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ತೀರ್ಪು ನೀಡಿತು. ಭಾರತದ ಚುನಾವಣಾ ಆಯೋಗವು ತನ್ನ ಹೊಸ ರಾಜಕೀಯ ರಚನೆಗೆ ಹೆಸರನ್ನು ಪಡೆಯಲು ಮತ್ತು ಆಯೋಗಕ್ಕೆ ಮೂರು ಆದ್ಯತೆಗಳನ್ನು ಒದಗಿಸಲು ಒಂದು-ಬಾರಿ ಆಯ್ಕೆಯನ್ನು ಒದಗಿಸುತ್ತದೆ. 7 ಫೆಬ್ರವರಿ 2024 ರಂದು ಮಧ್ಯಾಹ್ನ 3 ಗಂಟೆಯೊಳಗೆ ರಿಯಾಯಿತಿಯನ್ನು ಬಳಸಿಕೊಳ್ಳಬೇಕು.

ರಾಜ್ಯಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಶರದ್ ಪವಾರ್ ಬಣಕ್ಕೆ ಫೆ. 7ರೊಳಗೆ ಹೊಸ ಹೆಸರು ಸೂಚಿಸಲು ಚುನಾವಣಾ ಆಯೋಗವು ವಿಶೇಷ ಅವಕಾಶವನ್ನು ಮಂಗಳವಾರ ಕಲ್ಪಿಸಿದೆ.

ಆ ಮೂಲಕ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗ ಅಧಿಕೃತಗೊಳಿಸಿದೆ. ಇದು ಶರದ್ ಪವಾರ್ ಬಣಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದೆನ್ನಲಾಗಿದೆ.

ಕಳೆದ ಜುಲೈ 2ರಂದು ಕಳೆದವರ್ಷ ಜುಲೈನಲ್ಲಿ ಎನ್‌ಸಿಪಿ ಇಬ್ಭಾಗವಾಯಿತು. ಪಕ್ಷದ ನಾಯಕ ಅಜಿತ್‌ ಪವಾರ್‌ ಮತ್ತು ಇತರ ಎಂಟು ಶಾಸಕರು ಏಕನಾಥ ಶಿಂದೆ ನೇತೃತ್ವದ ಸರ್ಕಾರವನ್ನು ಸೇರಿದರು. ಆಗಿನಿಂದಲೂ, ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಉಭಯ ಬಣಗಳು ಹಕ್ಕು ಮಂಡಿಸಿವೆ. ಜೊತೆಗೆ, ಎದುರಾಳಿ ಬಣಕ್ಕೆ ನಿಷ್ಠರಾಗಿರುವವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದವು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿಯನ್ನು ಸದ್ಯ ಒಂದು ಬಣವಾಗಿ ಗುರುತಿಸಲಾಗುತ್ತಿದೆ. ಎನ್‌ಸಿಪಿ ಪಕ್ಷ ವಿಭಜನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗದಲ್ಲಿ ವಿಚಾರಣೆ ಹಂತದಲ್ಲಿವೆ.

ಸತತ 6 ತಿಂಗಳುಗಳ ಕಾಲ 10 ಬಾರಿ ಸುದೀರ್ಘ ವಿಚಾರಣೆ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗವು NCP ಪಕ್ಷದ ಅಜಿತ್ ಪವಾರ್ ಬಣಕ್ಕೆ ರಿಯಾಯಿತಿ ನೀಡಿದೆ. ಪಕ್ಷದ ಚುಕ್ಕಾಣಿ ಹಿಡಿಯಲು ನಾಳೆ ಮಧ್ಯಾಹ್ನ 3 ಗಂಟೆಯೊಳಗೆ ಮೂವರು ಆದ್ಯತೆಯ ಹೆಸರುಗಳ ಪಟ್ಟಿಯನ್ನು ಸೂಚಿಸಬೇಕು. ಇದು ಒಮ್ಮೆ ಮಾತ್ರ ಅನ್ವಯವಾಗುವ ರಿಯಾಯಿತಿಯಾಗಿದ್ದು, ಅವಧಿ ಮುಕ್ತಾಯವಾದ ಬಳಿಕ ಪರಿಗಣಿಸಲಾಗುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದೆ. ಅಜಿತ್ ನೇತೃತ್ವದ ಒಂದು ಬಣ ಸದ್ಯ ಬಿಜೆಪಿ ಜತೆ ಕೈಜೋಡಿಸಿದೆ.