ಬೆಳಗಾವಿ: ಭಾರಿ ಮಳೆ ಹಿನ್ನಲೆಯಲ್ಲಿ ಯಮಕನಮರಡಿ ಹಾಗೂ ಹುಕ್ಕೇರಿ ಭಾಗದ ಶಾಲಾ-ಕಾಲೇಜುಗಳಿಗೆ ಜು.25 ರ ಗುರುವಾರ (ಇಂದು) ರಜೆ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಯವರಿಗೆ ರಜೆ ನೀಡಲು ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಯಮಕನಮರಡಿಯ ಘಟಪ್ರಭಾ ನದಿ ತೀರದ ಪಾಶ್ಚಾಪುರ, ಇಸ್ಲಾಂಪುರ, ಹತ್ತರಗಿ, ಹುನ್ನೂರು,ಮಾಸ್ತಿಹೊಳಿ, ದಡ್ಡಿ, ಹಿರಣ್ಯಕೇಶಿ ನದಿ ಪಾತ್ರದ ಹೊಸೂರು, ಹೆಬ್ಬಾಳ, ಕುರಣಿ ಕ್ಲಸ್ಟರ್ ಮತ್ತು ಇಂಗಳಿ, ಘೋಡಗೇರಿ, ಬಡಕುಂದ್ರಿ ನೋಗಿನಹಾಳ, ಸುಲ್ತಾನಪುರ, ಗೊಡವಾಡ.

ಶಿರಹಟ್ಟಿ ಬಿಕೆ, ಮಸಗುಪ್ಪಿ, ತುಕ್ಕಾಯಿವಾಡಿ, ಹರಗಾಪುರ,ಶಿಂಧೆವಾಡಿ, ಹಿಟ್ನಿ ಶಾಲೆಗಳಿಗೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.