ಬೆಳಗಾವಿ : ಬುದ್ದ, ಬಸವ, ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ‌.ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಲು ನಾನು ಇಷ್ಟಪಡಲ್ಲ ಎಂದು ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೋಳಿ ವಿರುದ್ಧ ಕುಡಚಿ ಕಾಂಗ್ರೆಸ್ ಶಾಸಕ ಮಹೇಶ ತಮ್ಮಣ್ಣವರ ಹರಿಹಾಯ್ದರು.

ಚಿಕ್ಕೋಡಿ ಪಟ್ಟಣದ ಕಲ್ಲೋಳಕರ ಫಾರ್ಮಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸತೀಶ ಜಾರಕಿಹೋಳಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಅವರು
ಸತೀಶ ಜಾರಕಿಹೊಳಿಗೆ ಮೊದಲಿನಿಂದಲೂ ಸಹಕಾರ ನೀಡಿದ್ದೇವೆ.ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 22 ಸಾವಿರ ಮತಗಳ ಲೀಡ್ ನೀಡದೇವೆ.ನನಗೆ ವಿಧಾನಸಭೆ ಚುನಾವಣೆಯಲ್ಲಿ ಬಂದಷ್ಟು‌ ಲೀಡ್ ಎಂಪಿ ಚುನಾವಣೆಯಲ್ಲಿ ನೀಡಲಾಗಿದೆ.ಆದರೆ, ನಾನು ಪಕ್ಷೇತರ ಪರಾಜಿತ ಅಭ್ಯರ್ಥಿ ನಮ್ಮ ಮಾವನವರಾದ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಕೆಲಸ ಮಾಡಿದೇನೆ ಎಂದು ಸತೀಶ ಜಾರಕಿಹೋಳಿ ಆರೋಪವನ್ನು ಮಾಡಿದ್ದಾರೆ. ಇದು ಎಷ್ಟರ ಮಟ್ಟಕ್ಕೆ ಸರಿ ಎಂದು ಪ್ರೆಶ್ನಿಸಿದರು?
ನಮ್ಮ ಭಾಗದ ಬಹುಕೇತ ನಾಯಕರನ್ನು ಜಾರಕಿಹೊಳಿ ಫ್ಯಾಮಿಲಿ ರಾಜಕೀಯವಾಗಿ ನಿರ್ನಾಮ‌ ಮಾಡಿದ್ದಾರೆ.
ಕಲ್ಲೋಳಿಕರ ರಾಜಕೀಯವಾಗಿ‌ ಮುಗಿಸಲು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ.
ಪಕ್ಷಕ್ಕೆ ಮೋಸ ಮಾಡುವ ಕೆಲಸ ನಾನು ಮಾಡಲ್ಲ.ನನ್ನ ಕ್ಷೇತ್ರದಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿತ ಮತಗಳು ಬಂದಿವೆ.ಸತೀಶ ಜಾರಕಿಹೊಳಿ ರಾಜ್ಯದಲ್ಲಿಯೇ ಪ್ರಭಾವಿ ನಾಯಕರಿದ್ದಾರೆ.
ನಮ್ಮನ್ನು ತುಳಿಯುವ ಕೆಲಸ ಜಾರಕಿಹೊಳಿ ಫ್ಯಾಮಿಲಿ ಮಾಡುತ್ತಿದೆ‌ ಎಂದು‌ ಆರೋಪದ ಸುರಿಮಳೆಗೈದರು.

ಸತೀಶ್ ಜಾರಕಿಹೊಳಿ ಅವರಿಗೆ ದಲಿತ ಸಮಾಜದ ಮೇಲೆ ಕಳಕಳಿ ಇದ್ದರೆ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಹೈಕಮಾಂಡ್ ಗೆ ದೂರು ನೀಡಿದರೆ ಅದಕ್ಕೆ ಉತ್ತರ ನೀಡಲು ನಾನು ಸಿದ್ದ. ಮುಂದಿನ ದಿನಗಳಲ್ಲಿ ಅವರು ಗೋಕಾಕ ಹಾಗೂ ಅರಭಾವಿಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬರುವಂತೆ ಕೆಲಸ ಮಾಡಿ ತೋರಿಸಲಿ ಎಂದು ಅವರು ಮರು ಸವಾಲು ಹಾಕಿದರು.