![](https://udayaprabha.com/wp-content/uploads/2024/03/IMG-20240305-WA0225-1.jpg)
ಬೆಳಗಾವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಚ್ 6 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಅಥಣಿ ತಾಲೂಕು ಕೊಟ್ಟಲಗಿ ಗ್ರಾಮದ ಹೆಲಿಪ್ಯಾಡಿಗೆ ಬಂದಿಳಿಯುವರು. ನಂತರ ಅವರು ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಕ್ಕೆ ಕೊಟ್ಟಲಗಿ ಹೆಲಿಪ್ಯಾಡಿನಿಂದ ನೇರವಾಗಿ 2.45 ಕ್ಕೆ ಬೆಳಗಾವಿ ಸುವರ್ಣ ವಿಧಾನ ಸೌಧ ಹೆಲಿಪ್ಯಾಡ್ ಗೆ ಆಗಮಿಸುವವರು. ರಾತ್ರಿ 7:45 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.