ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ. ಉತ್ಪಾದಕತೆಯನ್ನು ಹೆಚ್ಚಿಸುವುದು ಸೇರಿದಂತೆ ಒಂಬತ್ತು ಆದ್ಯತೆಗಳ ಬಗ್ಗೆ ವಿವರಿಸಿದ್ದಾರೆ. ಮುಂದಿನ 2 ವರ್ಷಗಳಲ್ಲಿ 1 ಕೋಟಿ ರೈತರಿಗೆ ನೈಸರ್ಗಿಕ ಕೃಷಿಗೆ ನೆರವು ನೀಡಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಅವರು ತಿಳಿಸಿದ್ದಾರೆ.

“ಹೆಚ್ಚಿನ ಇಳುವರಿ ನೀಡುವ ಮತ್ತು
32 ಕ್ಷೇತ್ರ ಮತ್ತು ತೋಟಗಾರಿಕೆ ಬೆಳೆಗಳ ಹೊಸ 109 ಹೆಚ್ಚು ಇಳುವರಿ ಮತ್ತು ಹವಾಮಾನ-ನಿರೋಧಕ ತಳಿಗಳನ್ನು ರೈತರ ಕೃಷಿಗೆ ಬಿಡುಗಡೆ ಮಾಡಲಾಗುವುದು. ಮುಂದಿನ 2 ವರ್ಷಗಳಲ್ಲಿ, 1 ಕೋಟಿ ರೈತರು ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್ ಬೆಂಬಲದೊಂದಿಗೆ ನೈಸರ್ಗಿಕ ಕೃಷಿ ಪ್ರಾರಂಭಿಸಲಾಗುವುದು” ಎಂದು ಅವರು ಹೇಳಿದರು. ಗ್ರಾಮೀಣ ಆರ್ಥಿಕತೆಯ ತ್ವರಿತ ಟ್ರ್ಯಾಕಿಂಗ್ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನೀತಿಯ ಗುರಿಯಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಸಹಕಾರಿ ಕ್ಷೇತ್ರಕ್ಕೆ ಸರ್ಕಾರ ರಾಷ್ಟ್ರೀಯ ಸಹಕಾರ ನೀತಿಯನ್ನು ಹೊರತರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಷ್ಠಾನವನ್ನು ಸರ್ಕಾರವು ಸುಗಮಗೊಳಿಸುತ್ತದೆ. ಸೀಗಡಿ ಬ್ರೂಡ್‌ಸ್ಟಾಕ್‌ಗಳಿಗಾಗಿ ನ್ಯೂಕ್ಲಿಯಸ್ ಬ್ರೀಡಿಂಗ್ ಸೆಂಟರ್‌ಗಳ ಜಾಲವನ್ನು ಸ್ಥಾಪಿಸಲು ಅವರು ಹಣಕಾಸಿನ ನೆರವು ಘೋಷಿಸಿದರು.
ವಿತ್ತ ಸಚಿವರು ಕೃಷಿ ಕ್ಷೇತ್ರಕ್ಕೆ ಒಂಬತ್ತು ಆದ್ಯತೆಗಳನ್ನು ಪಟ್ಟಿ ಮಾಡಿದರು – ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಮುಂದಿನವುಗಳಲ್ಲಿ ಉತ್ಪಾದಕತೆ ಮತ್ತು ಹವಾಮಾನ-ನಿರೋಧಕ ತಳಿಗಳ ಅಭಿವೃದ್ಧಿ ಇದರಲ್ಲಿ ಸೇರಿದೆ.
ಕೃಷಿ ವಲಯಕ್ಕೆ ಬಂಪರ್ ಕೊಡುಗೆ…
ಈ ವರ್ಷ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ
ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನ 5 ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ
ನೂತನ ರಾಷ್ಟ್ರೀಯ ಸಹಕಾರ ನೀತಿ
ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ.

ಉಚಿತ ಪಡಿತರ ವ್ಯವಸ್ಥೆಯು 5 ವರ್ಷಗಳವರೆಗೆ ಮುಂದುವರಿಕೆ
ಉದ್ಯೋಗಕ್ಕಾಗಿ 3 ಪ್ರಮುಖ ಯೋಜನೆಗಳಲ್ಲಿ ಸರ್ಕಾರದ ಕೆಲಸ. ಹಾಗೂ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ.ನೀಡಿಕೆ
ಬಿಹಾರದಲ್ಲಿ 3 ಎಕ್ಸ್‌ಪ್ರೆಸ್‌ವೇಗಳ ಘೋಷಣೆ, ಅದಕ್ಕಾಗಿ 26 ಸಾವಿರ ಕೋಟಿ ರೂ.
ಬೋಧಗಯಾ-ವೈಶಾಲಿ ಎಕ್ಸ್‌ಪ್ರೆಸ್‌ವೇ ಹಾಗೂ ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ.
ವಿದ್ಯಾರ್ಥಿಗಳಿಗೆ 7.5 ಲಕ್ಷ ರೂ.ಕೌಶಲ್ಯ ಮಾದರಿ ಸಾಲ
ಉನ್ನತ ಶಿಕ್ಷಣಕ್ಕಾಗಿ ರೂ 10 ಲಕ್ಷದ ವರೆಗಿನ ಸಾಲ
ಮೊದಲ ಬಾರಿಗೆ ಉದ್ಯೋಗಿಗಳಿಗೆ ಹೆಚ್ಚುವರಿ ಪಿಎಫ್
ಉದ್ಯೋಗಗಳಲ್ಲಿ ಮಹಿಳೆಯರಿಗೆ ಆದ್ಯತೆ
ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ದ್ವಿಪಥ ಸೇತುವೆ.
20 ಲಕ್ಷ ಯುವಕರಿಗೆ 5 ವರ್ಷಗಳ ಅವಧಿಯಲ್ಲಿ ಕೌಶಲ್ಯ ತರಬೇತಿ
1000 ITI ಗಳನ್ನು ಹಬ್ ಮತ್ತು ಸ್ಪೋಕ್ ವ್ಯವಸ್ಥೆಗಳಲ್ಲಿ ನವೀಕರಣ
ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯು 5 ಪಟ್ಟು ವಿಸ್ತರಿಸುವ ನಿರೀಕ್ಷೆ
ಬಾಹ್ಯಾಕಾಶ ಕ್ಷೇತ್ರಕ್ಕೆ 1,000 ಕೋಟಿ ರೂ.ವರ್ಧಕ ಘೋಷಣೆ.

ನೌಕರರು ಮತ್ತು ಉದ್ಯೋಗದಾತರನ್ನು ವಿತ್ತೀಯವಾಗಿ ಬೆಂಬಲಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಉದ್ಯೋಗಕ್ಕೆ ಸೇರುವ ಎಲ್ಲ ಉದ್ಯೋಗಿಗಳು ಒಂದು ತಿಂಗಳವರೆಗೆ 15,000 ರೂ. ವರೆಗೆ ವೇತನವನ್ನು ಪಡೆಯಲಿದ್ದಾರೆ. ಇದರಿಂದ 2.1 ಕೋಟಿ ಯುವಕರಿಗೆ ಅನುಕೂಲವಾಗುವ ಯೋಜನೆಯಾಗಿದೆ. ಇದನ್ನು ಮೂರು ಹಂತಗಳಲ್ಲಿ ಒದಗಿಸಲಾಗುವುದು ಮತ್ತು ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂಪಾಯಿ ಎಂದು ಸಚಿವರು ಹೇಳಿದರು
ಪ್ರತಿ ಹೆಚ್ಚುವರಿ ನೇಮಕಾತಿಗೆ 2 ವರ್ಷಗಳ ಅವಧಿಗೆ ತಮ್ಮ EPFO ​​ಕೊಡುಗೆಗಳನ್ನು ಕವರ್ ಮಾಡಲು ಕಂಪನಿಗಳಿಗೆ ಸರ್ಕಾರವು ತಿಂಗಳಿಗೆ 3,000 ರೂಪಾಯಿಗಳನ್ನು ನೀಡುತ್ತದೆ. ಸಚಿವರ ಪ್ರಕಾರ, ವಿವಿಧ ಕ್ಷೇತ್ರಗಳಲ್ಲಿ ಸುಮಾರು 30 ಲಕ್ಷ ಯುವಕರು ಇದರ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.
ಸರ್ಕಾರವು 3 ಉದ್ಯೋಗ ಪ್ರೋತ್ಸಾಹ ಯೋಜನೆಗಳನ್ನು ಸಹ ಜಾರಿಗೊಳಿಸುತ್ತದೆ.

5 ವರ್ಷದಲ್ಲಿ 4.1 ಕೋಟಿ ಯುವಕರಿಗೆ ಉತ್ತೇಜನ…
ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಿದೆ ಎಂದು ಸೀತಾರಾಮನ್ ಹೇಳಿದರು.5 ವರ್ಷಗಳಲ್ಲಿ 4.1 ಕೋಟಿ ಯುವಕರನ್ನು ಕೇಂದ್ರೀಕರಿಸಲು ಐದು ಯೋಜನೆಗಳನ್ನು ಪ್ರಾರಂಭಿಸಲಾಗುವುದು, ಇದಕ್ಕಾಗಿ 2 ಲಕ್ಷ ಕೋಟಿ ರೂಪಾಯಿ ಕೇಂದ್ರ ವೆಚ್ಚವಾಗಲಿದೆ. ಈ ಬಜೆಟ್‌ನಲ್ಲಿ ನಾವು ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಎಂಎಸ್‌ಎಂಇ ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕರಿಸುತ್ತೇವೆ’ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ, ಮಧ್ಯಮ ವರ್ಗದವರಿಗೆ ನಿರಂತರ ಗಮನ ನೀಡಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಹೇಳಿದರು.